For the best experience, open
https://m.samyuktakarnataka.in
on your mobile browser.

ಗೋಕರ್ಣ ಆತ್ಮಲಿಂಗಕ್ಕೆ ದಿಗ್ವಿಜಯ ಸಿಂಗ್ ಪೂಜೆ

09:53 PM Aug 11, 2023 IST | Samyukta Karnataka
ಗೋಕರ್ಣ ಆತ್ಮಲಿಂಗಕ್ಕೆ ದಿಗ್ವಿಜಯ ಸಿಂಗ್ ಪೂಜೆ

ಗೋಕರ್ಣ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷದ ಹಿರಿಯ ರಾಷ್ಟ್ರೀಯ ನಾಯಕ ದಿಗ್ವಿಜಯ ಸಿಂಗ್ ಶುಕ್ರವಾರ ಸಂಜೆ ಇಲ್ಲಿನ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರಕ್ಕೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ಮಂದಿರದ ಮುಖ್ಯ ಅರ್ಚಕ ವೇ. ಅಮೃತೇಶ ಹಿರೇ ಪೂಜಾ ಕೈಂಕರ್ಯ ನೆರವೇರಿಸಿ ಮಂದಿರದ ವತಿಯಿಂದ ಪ್ರಸಾದ ನೀಡಿ ಗೌರವಿಸಿದರು. ಈ ವೇಳೆ ವೇ. ಮಹಾಬಲ ಉಪಾಧ್ಯ, ಕುಮಟಾ ತಹಶೀಲ್ದಾರ ಸತೀಶ ಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ಪಕ್ಷದ ಪ್ರಮುಖರಾದ ಮಾಜಿ ಜಿಂ. ಪಂ. ಸದಸ್ಯ ಪ್ರದೀಪ ನಾಯಕ, ಹನೀಫ್ ಸಾಫ್ ಗಜಾನನ ಹಳ್ಳೇರ, ನಾಗರಾಜ ನಾಯ್ಕ ಗಂಗಾವಳಿ ಮತ್ತಿತರರು ಉಪಸ್ಥಿತರಿದ್ದರು.