For the best experience, open
https://m.samyuktakarnataka.in
on your mobile browser.

ಗೋಪಾಲ ಜೋಶಿ ಬಂಧನ: ಎಸಿಪಿ ಚಂದನಕುಮಾರ್ ನೇತೃತ್ವದಲ್ಲಿ ಪಂಚನಾಮೆ

06:10 PM Oct 19, 2024 IST | Samyukta Karnataka
ಗೋಪಾಲ ಜೋಶಿ ಬಂಧನ  ಎಸಿಪಿ ಚಂದನಕುಮಾರ್ ನೇತೃತ್ವದಲ್ಲಿ ಪಂಚನಾಮೆ

ಹುಬ್ಬಳ್ಳಿ: ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂ. ಪಡೆದು ವಂಚನೆ ಮಾಡಿದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅವರ ಅಣ್ಣನನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದು, ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಲ್ಹಾದ ಜೋಶಿ ಅವರ ಅಣ್ಣ ಗೋಪಾಲ ಜೋಶಿ ಅವರನ್ನು ಕೊಲ್ಲಾಪುರದಲ್ಲಿ  ಬಂಧಿಸಲಾಗಿದೆ. ನಂತರ ಹುಬ್ಬಳ್ಳಿಗೆ ಕರೆತಂದು ತನಿಖೆ ನಡೆಸಲಾಗುತ್ತಿದೆ. ಗೋಪಾಲ ಜೋಶಿ ಮನೆಗೆ ಆಗಮಿಸಿದ ಪೊಲೀಸರು ಮಜಹರು ನಡೆಸಿದ್ದಾರೆ.

Tags :