For the best experience, open
https://m.samyuktakarnataka.in
on your mobile browser.

ಚಕ್ರವರ್ತಿ ಜೀವನ ಸಾಧನೆ ಪ್ರೇರಣೆಯಾಗಲಿ

12:10 PM Sep 30, 2024 IST | Samyukta Karnataka
ಚಕ್ರವರ್ತಿ ಜೀವನ ಸಾಧನೆ ಪ್ರೇರಣೆಯಾಗಲಿ

ಬೆಂಗಳೂರು: ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಹಿಂದಿ ಚಿತ್ರರಂಗದ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆಗಳು ತಿಳಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ತಮ್ಮ ಮನೋಜ್ಞ ಅಭಿನಯ, ಅಮೋಘ ನೃತ್ಯದ ಮೂಲಕ ಹಲವು ದಶಕಗಳ ಕಾಲ ಸಿನಿಪ್ರಿಯರನ್ನು ರಂಜಿಸಿದ ಮಿಥುನ್ ಚಕ್ರವರ್ತಿ ಈ ಗೌರವಕ್ಕೆ ಅತ್ಯಂತ ಅರ್ಹರು. ಇವರ ಜೀವನ ಸಾಧನೆ ಯುವ ನಟ - ನಟಿಯರಿಗೆ ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

Tags :