For the best experience, open
https://m.samyuktakarnataka.in
on your mobile browser.

ಆಳ್ವಿಕೆ ಮಾಡುವವರಿಗಿಂತ ಆಯ್ಕೆ ಮಾಡಿದವರ ಅಧಿಕಾರ ಮೇಲಿರಬೇಕು

05:07 PM Mar 16, 2024 IST | Samyukta Karnataka
ಆಳ್ವಿಕೆ ಮಾಡುವವರಿಗಿಂತ ಆಯ್ಕೆ ಮಾಡಿದವರ ಅಧಿಕಾರ ಮೇಲಿರಬೇಕು

ಚಿಕ್ಕಮಗಳೂರು: ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಕೊನೆಯಾಗಬೇಕು. ಪ್ರಶ್ನೆ ಕೇಳಿದ ಮತದಾರರಿಗೆ ಉತ್ತರ ನೀಡುವ ವ್ಯವಸ್ಥೆ ಆಗಬೇಕು ಎಂದು ಬಹುಭಾಷ ನಟ ಹಾಗೂ ಚಿಂತಕ ಪ್ರಕಾಶ್‌ರಾಜ್ ಪ್ರತಿಪಾದಿಸಿದರು.
ಅವರು ಇಂದು ಚಿಕ್ಕಮಗಳೂರು ಪ್ರಸ್‌ಕ್ಲಬ್ ವತಿಯಿಂದ ಏರ್ಪಡಿಸಿದ್ದ ತಿಂಗಳ ಅತಿಥಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳ್ವಿಕೆ ಮಾಡುವವರಿಗಿಂತ ಆಯ್ಕೆ ಮಾಡಿದವರ ಅಧಿಕಾರ ಮೇಲಿರಬೇಕು. ಅದು ಆಗದಿರುವುದೇ ಬೇಸರದ ಸಂಗತಿ ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಅದೇ ಪಕ್ಷ ಅದೇ ಕುಟುಂಬ ಅದೇ ಪರಿವಾರದವರು ಕ್ರಿಕೆಟ್ ಮ್ಯಾಚ್ ನಂತಹ ವ್ಯವಸ್ಥೆಯಾಗಿದೆ. ಹೊಸ ನಾಯಕರು ಬರುತ್ತಿಲ್ಲ ಎಂದು ವಿಶ್ಲೇಷಿಸಿದರು.
ಲಕ್ಷಾಂತರ ಮತ ಪಡೆದವರು ಒಂದು ಮತಕ್ಕೆ ತಮ್ಮನ್ನು ತಾವೇ ಮಾರಿಕೊಳ್ಳುತ್ತಿದ್ದಾರೆ. ಇದೆಲ್ಲ ಬದಲಾವಣೆ ಆಗಬೇಕಾದರೆ ಜನರು ಬದಲಾವಣೆ ಆಗಬೇಕೆಂದು ಅಭಿಪ್ರಾಯಿಸಿದರು.