For the best experience, open
https://m.samyuktakarnataka.in
on your mobile browser.

ಚಿತ್ರದಿಂದ ಸನ್ನಿವೇಶ ಕಟ್ಟಿಕೊಡುವ ಛಾಯಾಗ್ರಾಹಕರು: ಹಿಟ್ನಾಳ್

09:46 PM Oct 20, 2024 IST | Samyukta Karnataka
ಚಿತ್ರದಿಂದ ಸನ್ನಿವೇಶ ಕಟ್ಟಿಕೊಡುವ ಛಾಯಾಗ್ರಾಹಕರು  ಹಿಟ್ನಾಳ್

ಕೊಪ್ಪಳ: ಯಾವುದಾದರೊಂದು ಸನ್ನಿವೇಶವನ್ನು ತಿಳಿಸಬೇಕಾದರೆ ಇತಿಹಾಸಕಾರರು ಪುಸ್ತಕ ಬರೆಯುತ್ತಾರೆ. ಆದರೆ ಛಾಯಾಗ್ರಾಹಕರು ಒಂದು ಚಿತ್ರದಲ್ಲಿ ಒಂದು ಸನ್ನಿವೇಶವನ್ನು ಕಟ್ಟಿಕೊಡುತ್ತಾರೆ ಎಂದು ಸಂಸದ ಕೆ.ರಾಜಶೇಖರ ಹಿಟ್ನಾಳ ಹೇಳಿದರು.
ನಗರದ ಹೊಸಪೇಟೆ ರಸ್ತೆಯ ಶಿವಶಾಂತವೀರ ಮಂಗಲ ಭವನದಲ್ಲಿ ಭಾನುವಾರ ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಜಿಲ್ಲಾ ಛಾಯಾಗ್ರಾಹಕರ ಸಮಾವೇಶ ಮತ್ತು ಛಾಯಾಗ್ರಾಹಕರ ಸಮ್ಮಿಲನ ಕಾರ್ಯಕ್ರಮವನ್ನು ಕ್ಯಾಮರಾದಲ್ಲಿ ಫೋಟೊ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಉಜ್ಜಯಿನಿ ಶಾಖಾ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಜಯಕುಮಾರ ವಸ್ತ್ರದ್ ಅಧ್ಯಕ್ಷತೆ ವಹಿಸಿದ್ದರು.