ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಚಿರತೆ ದಾಳಿಗೆ ಆಕಳು ಬಲಿ

11:16 AM Mar 22, 2024 IST | Samyukta Karnataka

ನಸುಕಿನ‌ 4 ಗಂಟೆಯ ಸಮಯದಲ್ಲಿ ಚಿರತೆ ನಡೆಸಿದ ದಾಳಿಗೆ ಆಕಳು ಬಲಿ

ಧಾರವಾಡ : ಮನಸೂರ ಗ್ರಾಮದ ಹಳ್ಳದ ಕರೆಮ್ಮನ ಗುಡಿ ಹತ್ತಿರದ ಮಡಿವಾಳಪ್ಪ ಅಗಸರ್ ಎಂಬುವವರ ಮನೆಯಲ್ಲಿ ನಸುಕಿನ‌ 4 ಗಂಟೆಯ ಸಮಯದಲ್ಲಿ ಚಿರತೆ ನಡೆಸಿದ ದಾಳಿಗೆ ಆಕಳು ಬಲಿಯಾಗಿದೆ.
ಗುರುವಾರ ತಡರಾತ್ರಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಬಳಿ ಕಾಣಿಸಿಕೊಂಡ ಚಿರತೆ ಶುಕ್ರವಾರ ಬೆಳಿಗ್ಗೆ ಮನಸೂರ ಗ್ರಾಮದಲ್ಲಿ ಕಾಣಿಸಿಕೊಂಡು ದಾಳಿ ನಡೆಸಿರುವ ಸಾಧ್ಯತೆ ಇದೆ. ಇದು ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ವಲಯಾಧಿಕಾರಿ ಪ್ರದೀಪ ಪವಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಚಿರತೆಗಾಗಿ ಬೋನು ಇಡಲು ಕ್ರಮ ಕೈಗೊಂಡಿದ್ದಾರೆ.

Next Article