For the best experience, open
https://m.samyuktakarnataka.in
on your mobile browser.

ಜಮೀನಿಗೆ ನುಗ್ಗಿದ ಬಸ್: 15 ಜನರಿಗೆ ಗಾಯ

02:45 PM Aug 04, 2024 IST | Samyukta Karnataka
ಜಮೀನಿಗೆ ನುಗ್ಗಿದ ಬಸ್  15 ಜನರಿಗೆ ಗಾಯ

ರಾಯಚೂರು(ಮಾನ್ವಿ): ಬಸ್‌ನ ಸ್ಟೇರಿಂಗ್ ಕಟ್ಟಾದ ಪರಿಣಾಮ ರಸ್ತೆ ಪಕ್ಕದಲ್ಲಿರುವ ಜಮೀನಿಗೆ ಬಸ್ ನುಗ್ಗಿ 15 ಜನರು ಗಾಯಗೊಂಡ ಘಟನೆ ಭಾನುವಾರ ತಾಲ್ಲೂಕಿನ ನಸಲಾಪುರ ಕ್ರಾಸ್‌ನಲ್ಲಿ ನಡೆದಿದೆ.
ಐವರು ಗಂಭೀರವಾಗಿ ಗಾಯಗೊಂಡಿದ್ದು, 10 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಮಾನ್ವಿ ಘಟಕ ಬಸ್ ರಾಯಚೂರಿನಿಂದ ಗಂಗಾವತಿಗೆ ತೆರಳುತ್ತಿರುವಾಗ ಈ ಘಟನೆ ನಡೆದಿದೆ. ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Tags :