For the best experience, open
https://m.samyuktakarnataka.in
on your mobile browser.

ಜೋಶಿಯವರೇ ಅಭ್ಯರ್ಥಿ, ಟಿಕೆಟ್ ಬದಲಾವಣೆ ಚರ್ಚೆ ಅರ್ಥವಿಲ್ಲದ್ದು

07:40 PM Feb 14, 2024 IST | Samyukta Karnataka
ಜೋಶಿಯವರೇ ಅಭ್ಯರ್ಥಿ  ಟಿಕೆಟ್ ಬದಲಾವಣೆ ಚರ್ಚೆ ಅರ್ಥವಿಲ್ಲದ್ದು

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಸಮರ್ಥವಾಗಿ ಕೆಲಸ ಮಾಡುತ್ತಿರುವವರನ್ನು ಪಕ್ಷ ಮುಂದುವರಿಸುತ್ತದೆ. ಟಿಕೆಟ್ ಬದಲಾವಣೆ ಚರ್ಚೆಯೇ ಪಕ್ಷದಲ್ಲಿ ನಡೆದಿಲ್ಲ. ಆ ರೀತಿ ಚರ್ಚೆ ಹರಿಬಿಡುವುದರಲ್ಲಿ ಅರ್ಥವಿಲ್ಲ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಪ್ರಭಾರಿ ಹಾಗೂ ಸಂಸದ ಈರಣ್ಣ ಕಡಾಡಿ ಹೇಳಿದರು.

ಬುಧವಾರ ನಗರದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಸಿದ್ಧತೆ ಕುರಿತು ಪಕ್ಷದ ಪ್ರಮುಖರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರು, ಸಚಿವರಾದ ಪ್ರಹ್ಲಾದ ಜೋಶಿ ಸತತ ಆಯ್ಕೆಯಾಗಿ ಸಮರ್ಥವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಉತ್ತಮವಾಗಿ ಕೆಲಸ ಮಾಡಿಕೊಂಡು ಬಂದಿರುವವರನ್ನು ಪಕ್ಷ ಮುಂದುವರಿಸುತ್ತದೆ. ಟಿಕೆಟ್ ಬದಲಾವಣೆ ಬಗ್ಗೆ ಚರ್ಚೆ ಎಲ್ಲಿ ನಡೆದಿದೆ? ಚರ್ಚೆಯನ್ನೇ ಮಾಡಿಲ್ಲ. ಆ ರೀತಿ ಚರ್ಚೆ ಹರಿಬಿಡುವುದರಲ್ಲಿ ಅರ್ಥವಿಲ್ಲ ಎಂದರು.

ನಾನು ಇಲ್ಲಿಗೆ ಬಂದಿರುವುದು ಲೋಕಸಭಾ ಚುನಾವಣೆ ಸಿದ್ಧತೆ ಹೇಗಿರಬೇಕು, ಸಂಘಟನೆ ಕುರಿತು ಪ್ರಮುಖರೊಂದಿಗೆ ಚರ್ಚಿಸಲು ಮಾತ್ರ. ಟಿಕೆಟ್ ವಿಚಾರದ ಬಗ್ಗೆ ಚರ್ಚೆ ಮಾಡಲು ಬಂದಿಲ್ಲ. ಟಿಕೆಟ್ ವಿಚಾರ ಏನಿದ್ದರೂ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.

ಯಾರೇ ಟಿಕೆಟ್ ಕೇಳಬಹುದು. ಅಂತಿಮವಾಗಿ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.