For the best experience, open
https://m.samyuktakarnataka.in
on your mobile browser.

ತಂದೆಯನ್ನೇ ಕೊಲೆಗೈದ…

10:29 AM Nov 06, 2023 IST | Samyukta Karnataka
ತಂದೆಯನ್ನೇ ಕೊಲೆಗೈದ…

ಚಿತ್ರದುರ್ಗ: ಮಗನಿಂದಲೇ ತಂದೆಯ ಬರ್ಬರ ಹತ್ಯೆಯಾಗಿರುವ ಘಟನೆ ನಡೆದಿದೆ.
ಚಿತ್ರದುರ್ಗದ ಜಿಲ್ಲೆಯ ಚಳ್ಳಕೆರೆ ತಾಲೂಕಿನ ವರವು ಕಾವಲು ಬಳಿ ಈ ಘಟನೆ ನಡೆದಿದ್ದು. ಚಳ್ಳಕೆರೆ ತಾಲೂಕಿನ ಬತ್ತಯ್ಯನ ಹಟ್ಟಿ ನಿವಾಸಿ ಸೂರಯ್ಯ (55) ಕೊಲೆಯಾದ ದುರ್ದೈವಿ. ಮಗ ಮೋಹನ್ ಹತ್ಯೆ ಮಾಡಿದ ಆರೋಪಿಯಾಗಿದ್ದು, ಹತ್ಯೆ ಬಳಿ ಚಳ್ಳಕೆರೆ ಠಾಣೆಗೆ ಬಂದು ಶರಣಾಗಿದ್ದಾನೆ. ತಡರಾತ್ರಿ ಕುಡಿದ ಮತ್ತಿನಲ್ಲಿ ತಂದೆ- ಮಗನ ನಡುವೆ ಜಗಳ ನಡೆದಿತ್ತು, ಇಂದು ಬೆಳಗಿನ ಜಾವ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ, ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ CPI ಸಮೀವುಲ್ಲಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ