For the best experience, open
https://m.samyuktakarnataka.in
on your mobile browser.

ಅವಳಿನಗರಕ್ಕೆ ಶಶಿಕುಮಾರ್ ಕಮಿಷನರ್, ಮಹಾನಿಂಗ ನಂದಗಾವಿ ಡಿಸಿಪಿ

10:33 AM Jul 03, 2024 IST | Samyukta Karnataka
ಅವಳಿನಗರಕ್ಕೆ ಶಶಿಕುಮಾರ್ ಕಮಿಷನರ್  ಮಹಾನಿಂಗ ನಂದಗಾವಿ ಡಿಸಿಪಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಘಟಕಕ್ಕೆ ನೂತನ ಕಮಿಷನರ್ ಆಗಿ ಎನ್. ಶಶಿಕುಮಾರ ಅವರನ್ನು ನೇಮಕ ಮಾಡಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

2007ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಆಗಿರುವ ಶಶಿಕುಮಾರ ಅವರು, ಬೆಂಗಳೂರಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಐಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿದ್ದ ಐಪಿಎಸ್ ಅಧಿಕಾರಿ ಕುಶಾಲ್ ಚೌಕ್ಸೆ ಅವರನ್ನು ಸಹ ವರ್ಗಾಯಿಸಿದ್ದು, ತೆರವಾದ ಅವರ ಜಾಗಕ್ಕೆ ಗುಪ್ತಚರ ಇಲಾಖೆಯಲ್ಲಿ ಎಸ್ಪಿ ಆಗಿದ್ದ ಐಪಿಎಸ್ ಅಧಿಕಾರಿ ಮಹಾನಿಂಗ ನಂದಗಾವಿ ಅವರನ್ನು ನಿಯೋಜಿಸಲಾಗಿದೆ.

ನೂತನ ಕಮಿಷನರ್ ಮತ್ತು ಡಿಸಿಪಿ ಬುಧವಾರವೇ ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಮಿಷನರ್ ಅಗಿದ್ದ ರೇಣುಕಾ ಸುಕುಮಾರ್ ಅವರನ್ನು ಬೆಂಗಳೂರಿನ ಅಪರಾಧ ವಿಭಾಗಕ್ಕೆ ಎಐಜಿಪಿ ಯಾಗಿ ಹಾಗೂ ಡಿಸಿಪಿಯಾಗಿದ್ದ ಕುಶಾಲ ಚೌಕ್ಸೆ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.