For the best experience, open
https://m.samyuktakarnataka.in
on your mobile browser.

ಕಾನೂನಿಗೆ ಬೆಲೆ ಇಲ್ಲದಂತಾಗಿದೆ

04:02 PM May 16, 2024 IST | Samyukta Karnataka
ಕಾನೂನಿಗೆ ಬೆಲೆ ಇಲ್ಲದಂತಾಗಿದೆ

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಅವರನ್ನು ಅಮಾನುಷವಾಗಿ ಹತ್ಯೆ ಮಾಡಿದ್ದು, ಖಂಡನೀಯ. ಅತ್ಯಂತ ದಾರುಣುವಾದ ಘಟನೆ. ಮನೆಗೆ ನುಗ್ಗಿ ಕೊಲೆ ಮಾಡಿ ಹೋಗುತ್ತಾನೆ ಎಂದರೆ ಈ ನೆಲದ ಕಾನೂನಿಗೆ ಬೆಲೆ ಇಲ್ಲದಂತಾಗಿದೆ ಎಂದು ಮೂರುಸಾವಿರ ಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಈ ನೆಲದ ಕಾನೂನಿನ ಮೇಲಿನ ಗೌರವ ಉಳಿಯಬೇಕಾದರೆ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಜನರಿಗೆ ಸುರಕ್ಷತೆ ಇದೆ ಎಂದು ತೋರಿಸಿಕೊಡಬೇಕು. ಸರಕಾರ ಸಹ ಬದ್ಧತೆಯಿಂದ ನಡೆದುಕೊಳ್ಳಬೇಕು. ಅಂಜಲಿ ಅವರ ಸಹೋದರಿಯರಿಗೆ ಮೂರುಸಾವಿರಮಠದ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲಾಗುವುದು ಎಂದರು.