For the best experience, open
https://m.samyuktakarnataka.in
on your mobile browser.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತದಾನ

12:41 PM May 07, 2024 IST | Samyukta Karnataka
ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತದಾನ

ಕಲಘಟಗಿ : ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಕಲಘಟಗಿಯ ಮಡಕಿಹೊನ್ನಳ್ಳಿಯ ಮತಗಟ್ಟೆಯಲ್ಲಿ ಇಂದು ಮತ ಚಲಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವತು, ನಮ್ಮ ಸಂವಿಧಾನ ಒದಗಿಸಿದ ಪವಿತ್ರ ಕರ್ತವ್ಯವನ್ನು ನನ್ನ ಮತಚಲಾಯಿಸುವುದರ ಮೂಲಕ ನಿರ್ವಹಿಸಿದ್ದೇನೆ. ನೀವೂ ಕೂಡ ಮತದಾನ ಮಾಡುವುದರ ಮೂಲಕ ನಿಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಿ ಎಂದು ಮನವಿ ಮಾಡಿದರು.

ಲೋಕಸಭಾ ಚುನಾವಣೆಯ ಮೂರನೇ ಹಂತ ಹಾಗೂ ರಾಜ್ಯದಲ್ಲಿ ಎರಡನೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿದೆ.