ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕೈ ಕೊಟ್ಟ ಮತಯಂತ್ರ: ವಡಿಯಾಂಡಳ್ಳಿ ಗ್ರಾಮದಲ್ಲಿ 7:30 ರ ವರೆಗೂ ಮುಂದುವರೆದ ಮತದಾನ

08:19 PM Apr 26, 2024 IST | Samyukta Karnataka

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ವಡಿಯಾಂಡಳ್ಳಿ ಗ್ರಾಮದ ಭೂತ್ ನಂ144 ರಲ್ಲಿ ಮತಯಂತ್ರ ಕೈಕೊಟ್ಟ ಪರಿಣಾಮ ರಾತ್ರಿ‌ 7-30 ರ ವರೆಗೂ ಮತದಾನ ಪ್ರಕ್ರಿಯೆ ಮುಂದುವರೆದಿದೆ.

ಸುಮಾರು 3.19 ರಿಂದ 4 .30 ವರೆಗೆ ಮತಯಂತ್ರ ಸ್ಥಗಿತಗೊಂಡು ನಂತರ ಮತ ಯಂತ್ರ ದುರಸ್ತಿಪಡಿಸಿ ಮತದಾನ ಆರಂಭಿಸಲಾಯಿತು.

ಇದೇ ರೀತಿ ನೇರಳೆಕೆರೆ ಗ್ರಾಮದ 190 ರ ಮತಗಟ್ಟೆಯಲ್ಲಿ ಮತಯಂತ್ರ ಸಂಜೆ 5:00 ವೇಳೆಗೆ ಕೈ ಕೊಟ್ಟ ಪರಿಣಾಮ ಗ್ರಾಮದ ಸುಮಾರು 150ಕ್ಕೂ ಹೆಚ್ಚು ಮಂದಿ ಮತದಾನ ಮಾಡಲು ಕಾಯ್ದು ನಿತಿದ್ದ ಘಟನೆ ನಡೆದಿದೆ.

ನಂತರ ಮತಯಂತ್ರ ದುರಸ್ತಿಗೊಳಿಸಿ ಮತ ಚಲಾವಣೆಗೆ ಅವಕಾಶ ಮಾಡಿಕೊಟ್ಟು ಸಂಜೆ 7.30 ವರೆಗೂ ಮತದಾನ ಪ್ರಕ್ರಿಯೆ ನಡೆದಿದೆ.

ಮತಕಟ್ಟೆ ಅಧಿಕಾರಿಗಳು ನಿಗದಿತ ಸಮಯದೊಳಗೆ ಬಂದಿದ್ದ ಎಲ್ಲಾ ಮತದಾರರಿಗೂ ಮತದಾನದ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Next Article