For the best experience, open
https://m.samyuktakarnataka.in
on your mobile browser.

ಗಿಡಿಗೆರೆ ರಾಮಕ್ಕ ನಿಧನ

04:20 PM Apr 15, 2024 IST | Samyukta Karnataka
ಗಿಡಿಗೆರೆ ರಾಮಕ್ಕ ನಿಧನ

ಮಂಗಳೂರು: ಕಟೀಲು ದೇವಳದ ಪಾಡ್ದನ ಕೋಗಿಲೆ ಬಿರುದು ಸಹಿತ ನೂರಾರು ಪ್ರಶಸ್ತಿ ವಿಜೇತೆ ಗಿಡಿಗೆರೆ ರಾಮಕ್ಕ ಮೊಗೇರ ಅವರು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
102 ವರ್ಷದ ಗಿಡಿಗೆರೆ ರಾಮಕ್ಕನಿಗೆ 2000 ರಲ್ಲಿ ವೀರ ರಾಣಿ ಅಬ್ಬಕ್ಕ ಪ್ರಶಸ್ತಿ, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ, ಕಟೀಲು ದೇವಳದಿಂದ 'ಪಾಡ್ದನ ಕೋಗಿಲೆ' ಪ್ರಶಸ್ತಿ, 2001 ರಲ್ಲಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಪ್ರಶಸ್ತಿ, ಮತ್ತು ಕರ್ನಾಟಕ ಸರ್ಕಾರ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದರು. 2015 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ. ಅವರು 2004-05 ನೇ ಸಾಲಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು ಮತ್ತು ಅಸಂಖ್ಯಾತ ಇತರ ಗೌರವಗಳನ್ನು ಪಡೆದರು. ರಾಮಕ್ಕ ಆರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.