For the best experience, open
https://m.samyuktakarnataka.in
on your mobile browser.

ಜನರ ಹಿತಕ್ಕಾಗಿ ಮನೆ-ಮನೆಗೆ ಕುಡಿಯುವ ನೀರು

11:51 AM Mar 09, 2024 IST | Samyukta Karnataka
ಜನರ ಹಿತಕ್ಕಾಗಿ ಮನೆ ಮನೆಗೆ ಕುಡಿಯುವ ನೀರು

ಬೆಂಗಳೂರು: ನಿಪ್ಪಾಣಿ ಮತಕ್ಷೇತ್ರದ ಕೋಡ್ನಿ ಗ್ರಾಮದಲ್ಲಿ 3 ಕೋಟಿ 28 ಲಕ್ಷ ರೂ ಮೊತ್ತದಲ್ಲಿ ಜೆ.ಜೆ.ಎಮ್ ಯೋಜನೆಯಡಿ ಗ್ರಾಮದ 1103 ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ನಳಮಾಪಕ ಅಳವಡಿಸಿ ನೀರಿನ ಸೌಲಭ್ಯ ಒದಗಿಸುವ ಕಾಮಗಾರಿಗೆ ಶಾಸಕಿ ಶಶಿಕಲಾ ಜೊಲ್ಲೆ ಭೂ ಪೂಜೆ ನೆರವೇರಿಸಿ ಚಾಲನೆ ನೀಡಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಉತ್ತಮ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಅವಶ್ಯಕವಾಗಿದ್ದು, ಹೀಗಾಗಿ ಕ್ಷೇತ್ರದ ಜನರ ಹಿತಕ್ಕಾಗಿ ಮನೆ-ಮನೆಗೆ ಕುಡಿಯುವ ನೀರು ಒದಗಿಸುವ ಕಾಮಗಾರಿಗೆ ಚಾಲನೆ ನೀಡಿದ್ದು ಪ್ರತಿ ಮನೆಗೆ ನೀರು ಒದಗಿಸಲಾಗುವುದು ಎಂದಿದ್ದಾರೆ.

ಪೂಜಾ ಸ್ಥಳದಲ್ಲಿ ಪಕ್ಷದ ಕಾರ್ಯಕರ್ತ ಪ್ರವೀಣ ಕೀರ್ತನೆ ಅವರು ಬಿಡಿಸಿದ ಹೂವಿನ ಅಲಂಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.