For the best experience, open
https://m.samyuktakarnataka.in
on your mobile browser.

ಡಿ.ಕೆ. ಸುರೇಶ್‌ನನ್ನು ಒದ್ದು ಒಳಗೆ ಹಾಕಲಿ

12:30 AM Feb 02, 2024 IST | Samyukta Karnataka
ಡಿ ಕೆ  ಸುರೇಶ್‌ನನ್ನು ಒದ್ದು ಒಳಗೆ ಹಾಕಲಿ

ದಾವಣಗೆರೆ: ದೇಶ ವಿಭಜನೆ ಎಂಬ ಸಂಸದ ಡಿ.ಕೆ.ಸುರೇಶ್ ಹೇಳಿಕೆ ಸರಿಯಿಲ್ಲ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಭಾಗ ಮಾಡಿ ಪಾಕಿಸ್ತಾನವನ್ನೇ ಸರ್ವನಾಶ ಮಾಡಿದ್ದು ಕಾಂಗ್ರೆಸ್. ತಾಕತ್ತಿದ್ದರೆ ದೇಶ ಇಬ್ಭಾಗ ಮಾಡಿ ನೋಡೋಣ ಎಂದು ಸವಾಲಾಕಿದರು. ದೇಶದ್ರೋಹದ ಮಾತಾಡಿರುವ ಡಿ.ಕೆ.ಸುರೇಶ್‌ನನ್ನು ಕೇಂದ್ರ ಗೃಹಮಂತ್ರಿ ಒದ್ದು ಒಳಗೆ ಹಾಕಬೇಕು ಎಂದರು. ಈ ಮಾತನ್ನು ಅವರು ವಾಪಸ್ ಪಡೆದು ದೇಶದ ಜನರ ಬಳಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಮಂಡ್ಯದಲ್ಲಿ ಹನುಮ ಧ್ವಜ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಾವಿರಾರು ವರ್ಷಗಳಿಂದ ನಂಬಿಕೆ ಇಟ್ಟುಕೊಂಡು ಬಂದಿದ್ದೇವೆ. ಹನುಮ ಧ್ವಜ ಯಾವುದೋ ಪಕ್ಷದ್ದಲ್ಲ, ಇದು ಧರ್ಮ ಧ್ವಜ. ಕಾಂಗ್ರೆಸ್‌ಗೆ ನೈತಿಕತೆ ಇಲ್ಲ ಎಂದು ಟೀಕಿಸಿದರು.
ಎಂಪಿ ಚುನಾವಣೆಗೆ ಸ್ಪರ್ಧಿಸಲ್ಲ ನಮ್ಮಂತವರಿಗೆ ಚುನಾವಣೆ ಮಾಡೋ ಸಮಯವಲ್ಲ. ಮೋದಿ ಗೆಲ್ಲಿಸಿ ಭಾರತ ಉಳಿಸಿ ಅಭಿಯಾನ ಮಾಡುತ್ತಿದ್ದೇವೆ. ರಾಜ್ಯದಲ್ಲಿ ೨೮ ಕ್ಷೇತ್ರ ಗೆಲ್ಲುವಂತೆ ಅಭಿಯಾನ ನಡೆಸುತ್ತೇವೆ ಎಂದರು.