For the best experience, open
https://m.samyuktakarnataka.in
on your mobile browser.

ದೇವೇಗೌಡರ ಮೇಲೆ ಗೌರವ ಇದ್ದರೆ ಬಂದು ಶರಣಾಗು

04:25 PM May 20, 2024 IST | Samyukta Karnataka
ದೇವೇಗೌಡರ ಮೇಲೆ ಗೌರವ ಇದ್ದರೆ ಬಂದು ಶರಣಾಗು

ಬೆಂಗಳೂರು: ನನ್ನ ಮತ್ತು ದೇವೇಗೌಡರ ಮೇಲೆ ಗೌರವ ಇದ್ದರೆ 48 ಗಂಟೆಯೊಳಗೆ ಬಂದು ತನಿಖೆ ಎದುರಿಸು ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಯವರು ಸಂಸದ ಪ್ರಜ್ವಲ್‌ ರೇವಣ್ಣಗೆ ಮನವಿ ಮಾಡಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಷ್ಟು ದಿನ ಈ ಕಳ್ಳ-ಪೊಲೀಸ್ ಆಟ. ಎಲ್ಲೇ ಇದ್ದರೂ ಬಂದು ತನಿಖೆ ಎದುರಿಸು. ಮುಂದಿನ 24, 48 ಗಂಟೆ ಒಳಗೋ ಬಂದು ತನಿಖೆ ಎದುರಿಸು ಎಂದು ಮನವಿ ಮಾಡಿದರು.
ಯಾಕೆ ಹೆದರಬೇಕು. ಈ ನೆಲ ಕಾನೂನು ಇದೆ. ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ. ಕಾರ್ಯಕರ್ತರ ಮೇಲೆ ಪಕ್ಷ ಬೆಳೆದಿದೆ. ಅವರ ಆಶೀರ್ವಾದದಿಂದ ಬೆಳೆದಿದ್ದೇವೆ. ಹೀಗಾಗಿ ವಿದೇಶದಿಂದ ವಾಪಸ್ ಬಂದು ತನಿಖೆಗೆ ಸಹಕರಿಸು ಎಂದರು.