For the best experience, open
https://m.samyuktakarnataka.in
on your mobile browser.

ಬಂಡೀಪುರ ಟೈಗರ್‌ ಸಫಾರಿ ಬಂದ್‌: ಹೋಂ ಸ್ಟೇ, ರೆಸಾರ್ಟ್‌ಗೂ ನಿಷೇಧ

04:42 PM Apr 05, 2023 IST | Samyukta Karnataka
ಬಂಡೀಪುರ ಟೈಗರ್‌ ಸಫಾರಿ ಬಂದ್‌  ಹೋಂ ಸ್ಟೇ  ರೆಸಾರ್ಟ್‌ಗೂ ನಿಷೇಧ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 9ರಂದು ಭೇಟಿ ನೀಡಲಿದ್ದು, ವನ್ಯಜೀವಿ ಸಫಾರಿ ನಿಷೇಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ರಮೇಶ್ ಆದೇಶ ಹೊರಡಿಸಿದ್ದಾರೆ‌.
ಏ. 5 ರಿಂದ 9ರವರೆಗೆ ವನ್ಯಜೀವಿ ಸಫಾರಿಯನ್ನು ನಿರ್ಬಂಧಿಸಲಾಗಿದೆ ಜತೆಗೆ ಬಂಡೀಪುರ ವ್ಯಾಪ್ತಿಯಲ್ಲಿ ಬರುವ ರೆಸಾರ್ಟ್, ಹೋಂ ಸ್ಟೇ, ಲಾಡ್ಜ್‌ಗಳಲ್ಲಿ ಜನರ ವಾಸ್ತವ್ಯ, ತಂಗುವಿಕೆ, ಭೇಟಿಯನ್ನೂ ಈ ಅವಧಿಯಲ್ಲಿ ನಿಷೇಧಿಸಲಾಗಿದೆ.
ಪ್ರಧಾನಿ ಮೋದಿ ಅವರು ಏಪ್ರಿಲ್ 9ರಂದು ಬಂಡೀಪುರಕ್ಕೆ ಆಗಮಿಸಿ 50ನೇ ವರ್ಷದ ಹುಲಿ ಯೋಜನೆ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಂಡೀಪುರದಲ್ಲಿ ಬಿಗಿ ಭದ್ರತೆ, ಪೂರ್ವ ಸಿದ್ಧತೆ ಕೈಗೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.