ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಸವನಾಡು ಮಲೆನಾಡಿನ ಮುದವನ್ನು ನೀಡಲಿದೆ!

12:34 PM Mar 23, 2024 IST | Samyukta Karnataka

ಬರದನಾಡು ಈಗ ಮಲೆನಾಡು!

ಬೆಂಗಳೂರು: ನಮ್ಮ ಬಸವನಾಡು ಮತ್ತಷ್ಟು ಹಸಿರು ಸಿರಿ ಹೊದ್ದು, ಮಲೆನಾಡಿನ ಮುದವನ್ನು ನೀಡಲಿದೆ! ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ರಾಜ್ಯದ 3ನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಯ #ಮಮದಾಪುರ ಕೆರೆ ಅಂಗಳದಲ್ಲಿ ರಾಜ್ಯಕ್ಕೇ ಮಾದರಿ ಎನಿಸುವ ಅರಣ್ಯ ಅರಳಿಸುವ ಕಾರ್ಯ ನಿರಂತರವಾಗಿ ನಡೆದಿದೆ. ಕೋಟಿ ವೃಕ್ಷ ಅಭಿಯಾನದಡಿ ಕಳೆದ ವರ್ಷ ಸುಮಾರು 60 ಸಾವಿರ ಗಿಡಗಳನ್ನು ನೆಟ್ಟು ಮರಗಳನ್ನಾಗಿಸುವ ಕಾರ್ಯವಾಗಿತ್ತು. ಈ ಬಾರಿ ಮಳೆಗಾಲಕ್ಕೂ ಮುನ್ನವೇ ಗಿಡಗಳನ್ನು ನೆಡಲು ಅನುಕೂಲವಾಗುವಂತೆ ಗುಂಡಿಗಳನ್ನು ತೋಡಲಾಗಿದೆ. ಸಹಸ್ರಾರು ಗಿಡಗಳು ಅರಳಿ, ಪ್ರಾಣವಾಯುವನ್ನು ಉತ್ಪಾದಿಸಲಿದೆ. ನಮ್ಮ ಬಸವನಾಡು ಮತ್ತಷ್ಟು ಹಸಿರು ಸಿರಿ ಹೊದ್ದು, ಮಲೆನಾಡಿನ ಮುದವನ್ನು ನೀಡಲಿದೆ! ಎಂದಿದ್ದಾರೆ.

Next Article