ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮಡಿವಾಳೇಶ್ವರ ಮಠದ ಸ್ವಾಮೀಜಿ ನೇಣಿಗೆ ಶರಣು

10:09 PM May 02, 2024 IST | Samyukta Karnataka

ವಿಜಯಪುರ: ತಾಳಿಕೋಟೆ ತಾಲೂಕಿನ ತುಂಬಗಿ-ಸಾಸನೂರ ಶ್ರೀಮಡಿವಾಳೇಶ್ವರ ಹಿರೇಮಠದ ಶಂಕರಲಿಂಗ ದೇವರು(೨೩) ಸಾಸನೂರ ಮಠದ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾಸನೂರ-ತುಂಬಗಿ ಶ್ರೀ ಮಡಿವಾಳೇಶ್ವರ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠದ ಉತ್ತರಾಧಿಕಾರಿಯನ್ನಾಗಿ ನೇಮಿಸುವ ಸಲುವಾಗಿ ಮರಿದೇವರನ್ನಾಗಿ ಶಂಕರಲಿಂಗ ದೇವರನ್ನು ನೇಮಕ ಮಾಡಿಕೊಂಡಿದ್ದರು.
ಇಂದು ಬೆಳಗ್ಗೆ ೬-೮ ಗಂಟೆಯವರೆಗೆ ಸಾಸನೂರ ಮಠದಲ್ಲಿ ಭಕ್ತರಿಗೆ ಭೆಟ್ಟಿಯಾಗಿದ್ದಾರೆ ನಂತರ ಶ್ರೀಮಠದ ಕೋಣೆಯೊಳಗೆ ಹೋದವರು ಶ್ರೀಮಠಕ್ಕೆ ಸಾಕಷ್ಟು ಭಕ್ತರು ಬಂದರೂ ಕೂಡಾ ಹೊರಗಡೆ ಬರದ್ದರಿಂದ ೯.೩೦ಕ್ಕೆ ಸುಮಾರಿಗೆ ಭಕ್ತರೇ ಹೋಗಿ ಕೋಣೆಯ ಕಿಟಕಿಯಲ್ಲಿ ನೋಡಿದಾಗ ಫ್ಯಾನಿಗೆ ಶೆಲ್ಲೆಯಿಂದ ನೇಣು ಹಾಕಿಕೊಂಡಿರುವದು ಬೆಳಕಿಗೆ ಬಂದಿದೆ.
ನಂತರು ಭಕ್ತರು ಬಾಗಿಲು ಮುರಿದು ಶ್ರೀಗಳ ಪಾರ್ಥಿವ ಶರೀರ ಹೊರಗಡೆ ತಂದು ತುಂಬಗಿ ಗ್ರಾಮದಲ್ಲಿ ಮಠದಲ್ಲಿದ್ದ ಹಿರಿಯ ಶ್ರೀಗಳಿಗೆ ದೂರವಾಣಿಯ ಮೂಲಕ ತಿಳಿಸಿ ವೈದ್ಯರಿಂದ ತಪಾಸಣೆ ನಡೆಸಿದಾಗ ಮೃತಪಟ್ಟಿರುವದು ದೃಢಪಟ್ಟಿದೆ.

Next Article