For the best experience, open
https://m.samyuktakarnataka.in
on your mobile browser.

ಮತದಾನ ಮಾಡಿದ ಡಿಕೆ ಸಹೋದರರು

04:02 PM Apr 26, 2024 IST | Samyukta Karnataka
ಮತದಾನ ಮಾಡಿದ ಡಿಕೆ ಸಹೋದರರು

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ ಕೆ ಸುರೇಶ್ ಅವರು ಕನಕಪುರದ ದೊಡ್ಡಆಲಹಳ್ಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಮತದಾನ ಬಳಿಕ ಮಾತನಾಡಿರುವ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ದೊಡ್ಡ ಜಯ ಗಳಿಸಲಿದೆ. ರಾಜ್ಯ ಸರ್ಕಾರದ ಬಗ್ಗೆ ಜನರು ಸಂತೃಪ್ತಿ ಹೊಂದಿದ್ದಾರೆ, ಹಿಂದಿನ ಚುನಾವಣೆಗೂ ಮುನ್ನ ನಾವು ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲಿದ್ದಾರೆ. ಮಹಿಳೆಯರ ಒಲವು ಕಾಂಗ್ರೆಸ್ ಪರವಾಗಿದೆ ಎಂದು ಹೇಳಿದ್ದಾರೆ.