For the best experience, open
https://m.samyuktakarnataka.in
on your mobile browser.

ಮುಂದಿನ ಟಾರ್ಗೆಟ್ ಕಲಬುರ್ಗಿನಾ?

04:42 PM Jan 04, 2024 IST | Samyukta Karnataka
ಮುಂದಿನ ಟಾರ್ಗೆಟ್ ಕಲಬುರ್ಗಿನಾ

ಬೆಂಗಳೂರು: ಮುಂದಿನ ಟಾರ್ಗೆಟ್ ಕಲಬುರ್ಗಿನಾ? ಎಂದು ವಿರೋಧ ಪಕ್ಷದ ನಾಯಕ ಆರ್​.ಅಶೋಕ್ ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ, ಚಿಕ್ಕಮಗಳೂರಿನಲ್ಲಿ ದತ್ತಪೀಠ ಪ್ರಕರಣದ ಮರುತನಿಖೆ, ಮುಂದಿನ ಟಾರ್ಗೆಟ್ ಕಲಬುರ್ಗಿನಾ?
ಆಯೋಧ್ಯೆ ರಾಮಮಂದಿರದ ಉದ್ಘಾಟನೆಯ ಹೊಸ್ತಿಲಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದಿನೇ ದಿನೇ ಹೆಚ್ಚುತ್ತಿರುವ ದಬ್ಬಾಳಿಕೆ ನೋಡಿದರೆ, ಧರ್ಮದ ಹೆಸರಿನಲ್ಲಿ ಕಿಚ್ಚು ಹೊತ್ತಿಸಿ ಆ ಮಸಿಯನ್ನು ರಾಮನಿಗೆ ಬಳಿಯಿರಿ ಎಂದು ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಕಾಂಗ್ರೆಸ್‌ ಸರ್ಕಾರಕ್ಕೆ ಹುಕುಂ ನೀಡಿದಂತಿದೆ, ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲೇ ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನವಾಗಿದ್ದು ಕೇವಲ ಕಾಕತಾಳೀಯ ಎಂದರಲ್ಲ ಸಿಎಂ ಸಿದ್ದರಾಮಯ್ಯ ಅವರೇ, ಈಗ ದತ್ತಪೀಠ ಪ್ರಕರಣದ ಮರುತನಿಖೆಯೂ ಕಾಕತಾಳೀಯವೇ ಅಥವಾ ನಿಮ್ಮ ಕುತಂತ್ರದ ಮುಂದುವರೆದ ಭಾಗವೇ? ಅಯೋಧ್ಯೆಯ ಭವ್ಯ ರಾಮಮಂದಿರದ ಉದ್ಘಾಟನೆಯ ಸಂಭ್ರಮದಲ್ಲಿರುವ ಕನ್ನಡಿಗರ ಸಡಗರಕ್ಕೆ ಭಂಗ ತರುವುದೇ ನಿಮ್ಮ ಇರಾದೆ ಅಲ್ಲವೇ ಸಿದ್ದರಾಮಯ್ಯನವರೇ? ಎಂದು ಬರೆದುಕೊಂಡೊದ್ದಾರೆ.