For the best experience, open
https://m.samyuktakarnataka.in
on your mobile browser.

ಸಿದ್ಧಾಂತ ಮಾತನಾಡುವುದನ್ನು ಈಶ್ವರಪ್ಪ ಬಿಡಲಿ

05:14 PM Dec 14, 2023 IST | Samyukta Karnataka
ಸಿದ್ಧಾಂತ ಮಾತನಾಡುವುದನ್ನು ಈಶ್ವರಪ್ಪ ಬಿಡಲಿ

ಹುಬ್ಬಳ್ಳಿ: ನಾನು ಕಾಂಗ್ರೆಸ್ ಬಿಟ್ಟು ಮರಳಿ ಬಿಜೆಪಿಗೆ ಹೋಗುವುದಿಲ್ಲ. ಈಶ್ವರಪ್ಪ ಅವರನ್ನು ಭೇಟಿಯಾಗುವ ಅವಶ್ಯಕತೆ ನನಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿ.ಪ. ಸದಸ್ಯ ಜಗದೀಶ ಶೆಟ್ಟರ, ಕೆ.ಎಸ್. ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.
ಜಗದೀಶ ಶೆಟ್ಟರ ಬಿಜೆಪಿಗೆ ಮರಳಿ ಬರಬಹುದು ಎಂಬ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಉತ್ತರಿಸದ ಅವರು, ಹೀಗೆ ಏನೇನೂ ಮಾತನಾಡಿ ಪಕ್ಷ ಬಿಟ್ಟು ಹೋಗುವವರನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡಿಲ್ಲ ಎಂಬ ಸಣ್ಣ ವಿಚಾರಕ್ಕೆ ಶೆಟ್ಟರ ಬಿಜೆಪಿ ತೊರೆಯಬಾರದಿತ್ತು ಎನ್ನುವ ಈಶ್ವರಪ್ಪ, ಒಂದು ಸಣ್ಣ ಟಿಕೆಟ್ ಕೊಡಿಸಬಹುದಿತ್ತಲ್ಲ ಎಂದು ಪ್ರಶ್ನಿಸಿದರು.
ನಾನು ಅಪಮಾನದಿಂದ ಹೊರಗೆ ಬಂದಿದ್ದೇನೆ. ಈಶ್ವರಪ್ಪನವರೇ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದರೆ ತಿಳಿಯುತ್ತಿತ್ತು. ಎಲ್.ಕೆ. ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದ ಬಿಜೆಪಿ ಇದೀಗ ಉಳಿದಿಲ್ಲ. ಸಿದ್ಧಾಂತ ಮಾತಾನಾಡುವುದನ್ನು ಈಶ್ವರಪ್ಪ ಬಿಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.