For the best experience, open
https://m.samyuktakarnataka.in
on your mobile browser.

ಸೈದ್ಧಾಂತಿಕವಾಗಿ ಎಎಪಿ-ಕಾಂಗ್ರೆಸ್ ಒಂದೇ: ಲಾಡ್

05:43 PM Apr 14, 2024 IST | Samyukta Karnataka
ಸೈದ್ಧಾಂತಿಕವಾಗಿ ಎಎಪಿ ಕಾಂಗ್ರೆಸ್ ಒಂದೇ  ಲಾಡ್

ಹುಬ್ಬಳ್ಳಿ: ಸೈದ್ಧಾಂತಿಕವಾಗಿ ಅಭಿವೃದ್ಧಿಪರ ವಿಚಾರಧಾರೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಒಂದೇ ಆಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಇಲ್ಲಿನ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ರವಿವಾರ ಆಯೋಜಿಸಿದ್ಧ ಡಾ. ಬಿ.ಆರ್. ಅಂಬೇಡ್ಕರ ಅವರ ೧೩೩ ನೆಯ ಜಯಂತಿ ಮತ್ತು ಇಂಡಿಯಾ ಒಕ್ಕೂಟದ ಎಎಪಿ ಧಾರವಾಡ ಜಿಲ್ಲಾ ಘಟಕದ ಸೆಂಟ್ರಲ್ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಬಿಜೆಪಿಯು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ. ಇದರ ಅರಿವು ಪ್ರತಿಯೊಬ್ಬರಿಗೂ ಆಗಿದೆ. ಬಿಜೆಪಿ ಕೋಟೆಯಂತಿರುವ ಧಾರವಾಡ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷವು ಎಎಪಿ ಮತ್ತು ಇಂಡಿ ಒಕ್ಕೂಟವು ಭೇದಿಸಲಿದೆ ಎಂದರು.
ಕ್ಷೇತ್ರದ ಮತದಾರರು ಬದಲಾವಣೆ ಬಯಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸಮರ್ಥ ಅಭ್ಯರ್ಥಿ ವಿನೋದ ಅಸೂಟಿ ಸ್ಪರ್ಧಿಸಿದ್ದಾರೆ. ಅವರ ಗೆಲುವಿಗೆ ಶ್ರಮಿಸೋಣ ಎಂದರು.