ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹಳ್ಳದಲ್ಲಿ ಸಿಕ್ಕ ಶಿಶು ಮಕ್ಕಳ ಕಲ್ಯಾಣ ಇಲಾಖೆಯ ವಶಕ್ಕೆ

11:26 AM May 01, 2024 IST | Samyukta Karnataka

ಇಳಕಲ್ : ನಗರದ ಹಿರೇಹಳ್ಳದಲ್ಲಿ ಸೋಮವಾರದಂದು ಸಿಕ್ಕ ನವಜಾತ ಶಿಶುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡರು.
ಪತ್ರಿಕೆಯಲ್ಲಿ ಬಂದ ವರದಿಯ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ಮಗುವನ್ನು ತೆಗೆದುಕೊಂಡು ಹೋದ ಮಹಿಳೆಯ ಮನೆಗೆ ಹೋಗಿ ಮಗುವನ್ನು ವಶಕ್ಕೆ ಪಡೆಯಲು ಹೋದಾಗ ಮಹಿಳೆಯು ಮಗುವನ್ನು ಕೊಡಲು ನಿರಾಕರಿಸಿದಳು.
ಆಗ ಅನಿವಾರ್ಯವಾಗಿ ಪೋಲಿಸರನ್ನು ಸಂಪರ್ಕಿಸಿ ಮಹಿಳಾ ಪೇದೆಯನ್ನು ಕರೆಸಿದ ನಂತರ ಮಹಿಳೆ ಮಗುವನ್ನು ಇಲಾಖೆಯ ವಶಕ್ಕೆ ನೀಡಿದಳು ಎಂದು ಹೇಳಲಾಗಿದೆ. ನಂತರ ಮಗುವನ್ನು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು ಅಲ್ಲಿಂದ ಮಗುವನ್ನು ಬಾಗಲಕೋಟೆ ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ದಿಗೆ ನೀಡಲಾಯಿತು, ಇಲಾಖೆಯ ಅಧಿಕಾರಿಗಳಾದ ಬಾಗಲಕೋಟೆಯ ಕೇಶವದಾಸ ಸಿಡಿಪಿಒ ಗಿರಿ ತಮ್ಮಣ್ಣನವರ , ವಿಜಯಲಕ್ಷ್ಮಿ ಹಿರೇಮಠ ,ನೇತ್ರಾವತಿ ಬಡಿಗೇರ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

Next Article