For the best experience, open
https://m.samyuktakarnataka.in
on your mobile browser.

ಹುಬ್ಬಳ್ಳಿಗೆ ಆಗಮಿಸುವ ರೈಲುಗಳ ಸಮಯ ಬದಲಾವಣೆ

08:12 PM May 29, 2024 IST | Samyukta Karnataka
ಹುಬ್ಬಳ್ಳಿಗೆ ಆಗಮಿಸುವ ರೈಲುಗಳ ಸಮಯ ಬದಲಾವಣೆ

ಹುಬ್ಬಳ್ಳಿ: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಕೆಲವು ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯವನ್ನು ಪರಿಷ್ಕರಿಸಲಾಗಿದೆ. ಈ ರೈಲುಗಳ ಬದಲಾವಣೆಯು ಕೆಳಗೆ ತಿಳಿಸಿದ ಪ್ರಯಾಣದ ದಿನಾಂಕಗಳಿಂದ ಜಾರಿಗೆ ಬರಲಿದೆ ಎಂದು ನೈಋತ್ಯ ರೈಲ್ವೆ ವಲಯ ತಿಳಿಸಿದೆ.

ಜೂನ್ ೨೧ ರಿಂದ ಜಾರಿಗೆ ಬರುವಂತೆ(ರೈಲು ಸಂಖ್ಯೆ ೧೬೫೩೨ )ಕೆಎಸ್‌ಆರ್ ಬೆಂಗಳೂರು-ಅಜ್ಮೀರ್ ಗರೀಬ್ ನವಾಜ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಿಗ್ಗೆ ೦೬:೦೦/೦೬:೧೦ ಗಂಟೆಯ ಬದಲು ೦೫:೩೫ಕ್ಕೆ ಆಗಮಿಸಿ, ೦೫:೪೫ ಗಂಟೆಗೆ ಹೊರಡಲಿದೆ.

ಜೂನ್ ೨೨ ರಿಂದ ಜಾರಿಗೆ ಬರುವಂತೆ (ರೈಲು ಸಂಖ್ಯೆ ೧೬೫೦೬ )ಕೆಎಸ್‌ಆರ್ ಬೆಂಗಳೂರು-ಗಾಂಧಿ ಧಾಮ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಿಗ್ಗೆ ೦೬:೦೦/೦೬:೧೦ ಗಂಟೆಯ ಬದಲು ೦೫:೩೫ ಕ್ಕೆ ಆಗಮಿಸಿ, ೦೫:೪೫ ಗಂಟೆಗೆ ಹೊರಡಲಿದೆ.

ಜೂನ್ ೨೩ ರಿಂದ ಜಾರಿಗೆ ಬರುವಂತೆ (ರೈಲು ಸಂಖ್ಯೆ ೧೬೫೩೪) ಕೆಎಸ್‌ಆರ್ ಬೆಂಗಳೂರು-ಜೋಧಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಿಗ್ಗೆ ೦೬:೦೦/೦೬:೧೦ ಗಂಟೆಯ ಬದಲು ೦೫:೩೫ ಕ್ಕೆ ಆಗಮಿಸಿ, ೦೫:೪೫ಕ್ಕೆ ಹೊರಡಲಿದೆ.

ಜೂನ್ ೨೪ರಿಂದ ಜಾರಿಗೆ ಬರುವಂತೆ (ರೈಲು ಸಂಖ್ಯೆ ೧೬೫೦೮ ) ಕೆಎಸ್‌ಆರ್ ಬೆಂಗಳೂರು-ಜೋಧಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಿಗ್ಗೆ ೦೬:೦೦/೦೬:೧೦ ಗಂಟೆಯ ಬದಲು ೦೫:೩೫ ಕ್ಕೆ ಆಗಮಿಸಿ ೦೫:೪೫ ಗಂಟೆಗೆ ನಿರ್ಗಮಿಸುತ್ತದೆ.

ಜೂನ್ ೨೫ರಿಂದ ಜಾರಿಗೆ ಬರುವಂತೆ (ರೈಲು ಸಂಖ್ಯೆ ೧೬೨೧೦) ಮೈಸೂರು-ಅಜ್ಮೀರ್ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಿಗ್ಗೆ ೦೬:೦೦/೦೬:೧೦ ಗಂಟೆಯ ಬದಲು ೦೫:೩೫ ಕ್ಕೆ ಆಗಮಿಸಿ, ೦೫:೪೫ ಗಂಟೆಗೆ ಹೊರಡುತ್ತದೆ.

ಸುಗಮ ಮತ್ತು ತೊಂದರೆ ರಹಿತ ಪ್ರಯಾಣ ಬೆಳೆಸುವುದನ್ನು ಖಚಿತಪಡಿಸಿಕೊಳ್ಳಲು ಪ್ರಯಾಣಿಕರು ಈ ಪರಿಷ್ಕೃತ ಸಮಯವನ್ನು ಗಮನಿಸಬೇಕು ಎಂದು ನೈಋತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಮನವಿ ಮಾಡಿದ್ದಾರೆ.