ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ತುರ್ತು ಕಾಮಗಾರಿ: ಕೆಲ ರೈಲುಗಳು ಭಾಗಶಃ ರದ್ದು

09:42 PM Jan 16, 2024 IST | Samyukta Karnataka

ಹುಬ್ಬಳ್ಳಿ: ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಕೆಲ ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ವಲಯ ರದ್ದುಪಡಿಸಿದೆ. ಕೆಲ ರೈಲುಗಳಿಗೆ ಮಾರ್ಗಮಧ್ಯದಲ್ಲಿ ೪೦, ೯೦ ನಿಮಿಷಗಳನ್ನು ಸಮಯ ನಿಯಂತ್ರಣ ಮಾಡಿ ಆದೇಶಿಸಿದೆ.
ಭಾಗಶಃ ರದ್ದಾದ ರೈಲುಗಳು
ಕೊಪ್ಪಳ-ಗಿಣಿಗೇರಾ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ ೬೩ರ ಬದಲಿಗೆ ಸಬ್ ವೇ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೊಲ್ಲಾಪುರ-ಹೊಸಪೇಟೆ ಎಕ್ಸ್ಪ್ರೆಸ್ (ರೈಲು ಸಂಖ್ಯೆ ೧೧೩೦೫) ರೈಲು ಜನವರಿ ೨೨ ರಿಂದ ೩೧ ರವರೆಗೆ ಗದಗ-ಹೊಸಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಪಡಿಸಲಾಗುತ್ತಿದೆ. ಈ ನಿಗದಿತ ಅವಧಿಯಲ್ಲಿ ಗದಗ ನಿಲ್ದಾಣದಲ್ಲಿ ತನ್ನ ಸೇವೆ ಕೊನೆಗೊಳ್ಳಲಿದೆ.
ಹೊಸಪೇಟೆ-ಸೋಲಾಪುರ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ ೧೧೩೦೬) ಜನವರಿ ೨೩ ರಿಂದ ಫೆಬ್ರವರಿ ೧ರವರೆಗೆ ಹೊಸಪೇಟೆ-ಗದಗ ನಿಲ್ದಾಣಗಳ ನಡುವೆ ಭಾಗಶಃ ರದ್ದುಪಡಿಸಲಾಗುತ್ತಿದೆ. ಈ ರೈಲು ತನ್ನ ನಿಗದಿತ ಸಮಯಕ್ಕೆ ಹೊಸಪೇಟೆ ನಿಲ್ದಾಣ ಬದಲು ಗದಗ ನಿಲ್ದಾಣದಿಂದ ಹೊರಡಲಿದೆ.
ರೈಲುಗಳ ನಿಯಂತ್ರಣ: ಜನವರಿ ೨೨, ೨೩, ೨೯ ಮತ್ತು ೩೧ ರಂದು ವಿಜಯವಾಡ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ ೧೭೩೩೦ ವಿಜಯವಾಡ-ಎಕ್ಸಪ್ರೆಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ ೪೦ ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.
ಮೈಸೂರು ವಿಭಾಗದ ಮಂದಗೆರೆ ನಿಲ್ದಾಣದಲ್ಲಿ ಅಗತ್ಯ ಸಿಗ್ನಲಿಂಗ್ ಸಂಬಂಧಿತ ಕಾಮಗಾರಿಯನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ ಅವುಗಳ ಮಾಹಿತಿ ಕೆಳಗಿನಂತಿವೆ:
ಯಶವಂತಪುರ-ಮೈಸೂರು ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ ೧೬೨೦೭ ) ಜನವರಿ ೨೦ರಂದು ಹಾಸನ ಮತ್ತು ಮೈಸೂರು ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
ಅರಸೀಕೆರೆ-ಮೈಸೂರು ವಿಶೇಷ ಪ್ಯಾಸೆಂಜರ್ ರೈಲು (ರೈಲು ಸಂಖ್ಯೆ ೦೬೨೬೭) ಜನವರಿ ೨೦ರಂದು ಅರಸೀಕೆರೆ ನಿಲ್ದಾಣದಿಂದ ೯೦ ನಿಮಿಷ ತಡವಾಗಿ ಹೊರಡಲಿದೆ.
ಮೈಸೂರು-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ ೦೬೨೬೯ ) ಜನವರಿ ೨೦ರಂದು ಮೈಸೂರು ನಿಲ್ದಾಣದಿಂದ ೯೦ ನಿಮಿಷ ತಡವಾಗಿ ಹೊರಡಲಿದೆ.
ಮೈಸೂರು-ಅರಸೀಕೆರೆ ವಿಶೇಷ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ ೦೬೨೧೪) ಜನವರಿ ೨೦ರಂದು ೪೫ ನಿಮಿಷಗಳ ಕಾಲ ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ.

Next Article