ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಾಂಗ್ರೆಸ್ ಭಸ್ಮವಾಗುವವರೆಗೂ ಹೋರಾಟ ನಿಲ್ಲದು

05:18 PM Jan 03, 2024 IST | Samyukta Karnataka

ದಾವಣಗೆರೆ: ಕಾಂಗ್ರೆಸ್ ಅಲ್ಪರನ್ನು ತಲೆಯ ಮೇಲೆ ಹೊತ್ತು ತಿರುಗುತ್ತಿರುವುದು ಬಹುಸಂಖ್ಯಾತರ ಅರಿವಿಗೆ ಬಂದಿದ್ದು, ಶ್ರದ್ಧಾ ಕೇಂದ್ರಗಳನ್ನು ಉಳಿಸಲು ಹೋರಾಟ ಮಾಡಿದ ಕರಸೇವಕರನ್ನು ಮುಟ್ಟಿದರೆ ಕಾಂಗ್ರೆಸ್ ಭಸ್ಮವಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಎಚ್ಚರಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೩೦ ವರ್ಷಗಳ ಹಿಂದಿನ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಆ ಭಾಗದಲ್ಲಿ ಇದ್ದ ೬೦೦ ಪ್ರಕರಣಗಳಲ್ಲಿ ಇದೇ ಫೈಲ್ ಯಾಕೆ ಅವರ ಕಣ್ಣಿಗೆ ಬಿತ್ತು. ಈ ರೀತಿ ರಾಜಕಾರಣದಿಂದ ಕಾಂಗ್ರೆಸ್‌ಗೆ ತೊಂದರೆಯಾಗುತ್ತದೆ. ರಾಮಭಕ್ತರ ಸಿಟ್ಟಿಗೆ ಗುರಿಯಾಗಬೇಡಿ ಎಂದು ಎಚ್ಚರಿಸಿದ ಅವರು, ರಾಮ ಭಕ್ತರ, ರಾಷ್ಟçಭಕ್ತರ ಬೃಹತ್ ಸಂಘಟನೆ ನಮ್ಮಲ್ಲಿ ಇದ್ದು, ಎಷ್ಟು ಜನ ಕಳುಹಿಸುತ್ತಾರೋ ಕಳುಹಿಸಲಿ ನೋಡೋಣ ಎಂದು ಸವಾಲು ಹಾಕಿದರು.
ಲೋಕಸಭಾ ಚುನಾವಣೆ ಅಭಿವೃದ್ಧಿ ಮೇಲೆ ಚುನಾವಣೆಗೆ ಹೋಗೋಣ ಎಂದರೆ ಅದಕ್ಕೂ ತಯಾರು. ಹಿಂದುತ್ವ, ಮುಸಲ್ಮಾನರ ಹೆಸರಿನಲ್ಲಿ ಚುನಾವಣೆಗೆ ಹೋಗುವುದಾದರೆ ಅದಕ್ಕೂ ನಾವು ತಯಾರಿದ್ದೇವೆ. ಆದರೆ ನೀವು ಪಿಎಫ್‌ಐ, ರಾಷ್ಟ್ರದ್ರೋಹಿಗಳಿಗೆ ಬೆಂಬಲ ಕೊಡುವುದಾದರೆ ಬಹಿರಂಗವಾಗಿ ಹೇಳಿ. ಚುನಾವಣೆ ನೆಮ್ಮದಿಯಿಂದ ಮಾಡಿಕೊಡಲು ಅವಕಾಶಕೊಡಿ. ಕೋಮುಗಲಭೆ ಮುಖಾಂತರ ಚುನಾವಣೆ ಮಾಡಬೇಕು ಎಂದು ನಿಮ್ಮ ಆಸೆ ಇದ್ದರೆ ನಾವು ಏನು ಮಾಡಲು ಆಗುವುದಿಲ್ಲ ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಸಿದ್ದರಾಮಯ್ಯ ಅವರನ್ನು ಪೂಜಿಸುವುದಾದರೆ ಮಾಡಿಕೊಳ್ಳಲಿ. ಅವರಿಗೆ ಸ್ವಾತಂತ್ರ‍್ಯವಿದೆ. ಆದರೆ ಅಯೋಧ್ಯೆಯ ರಾಮನ ಬಗ್ಗೆ ಟೀಕಿಸುವುದು ತರವಲ್ಲ. ರಾಮಮಂದಿರವನ್ನು ರಾಷ್ಟ್ರಮಂದಿರ ಎಂದು ಕರೆಯುತ್ತೇವೆ. ರಾಜಕಾರಣದಲ್ಲಿ ಟೀಕೆ ಸಹಜ. ಆದರೆ ಸಂಸ್ಕೃತಿ, ಹಿಂದುತ್ವದ ಬಗ್ಗೆ ಮಾತನಾಡಿದರೆ ಪ್ರಾಣ ಹೋದರೂ ಬಿಡುವುದಿಲ್ಲ. ಬಿಜೆಪಿ ಇರುವುದೇ ಹಿಂದುತ್ವ ಉಳಿಸಲು ಎಂದು ಸಮರ್ಥಿಸಿಕೊಂಡರು.
ಹಿಂದುತ್ವ ಯಾವುದೋ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಸುಪ್ರೀಂ ಕೋರ್ಟ್ ಹೇಳಿರುವಂತೆ ಅದು ಜೀವನದ ಪದ್ಧತಿ. ಯಾವ ದೇವರನ್ನಾದರೂ ಪೂಜೆ ಮಾಡಲು ಸ್ವಾತಂತ್ರ‍್ಯವಿದೆ. ಆದರೆ ನನ್ನ ಪೂಜೆ, ಪದ್ಧತಿಗೆ ಅಡ್ಡ ಬಂದರೆ ಬಿಡುವುದಿಲ್ಲ. ನಾವು ರಾಮ, ಕೃಷ್ಣ, ವಿಶ್ವನಾಥನ ಬಗ್ಗೆ ಆಸಕ್ತಿ ತೋರಿಸಿದರೆ ಇವರಿಗೆ ಯಾಕೆ ಸಿಟ್ಟು, ಇವರೇನು ಬಾಬರ್ ವಂಶದವರಾ? ಎಂದು ಕಾಂಗ್ರೆಸ್‌ನವರ ಮೇಲೆ ಹರಿಹಾಯ್ದರು.

ಚುನಾವಣೆಯಲ್ಲಿ ತಕ್ಕಪಾಠ
ಕಾಂಗ್ರೆಸ್‌ನವರು ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರನ್ನು ಬಳಸಿಕೊಂಡು ಚುನಾವಣೆ ಎದುರಿಸಿದರು. ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹಿಂದುಳಿದವರು ಹಾಗೂ ದಲಿತರಿಗೆ ಅರಿವಾಗಿ ಈಗ ಕಾಂಗ್ರೆಸ್ ಬಿಟ್ಟಿದ್ದಾರೆ. ಮುಸಲ್ಮಾನರೊಬ್ಬರನ್ನೇ ಗಟ್ಟಿಯಾಗಿಟ್ಟುಕೊಂಡು ರಾಜಕಾರಣ ಮಾಡಲು ಹೊರಟಿರುವ ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ಜನರು ಯು–ಟರ್ನ್ ಹೊಡೆಯುತ್ತಾರೆ. ಮುಸಲ್ಮಾನರಿಗೆ ೧೦ ಸಾವಿರ ಕೋಟಿಗಿಂತಲೂ ಜಾಸ್ತಿ ಕೊಡಿ. ಆದರೆ, ದಲಿತರು ಹಿಂದುಳಿದ ವರ್ಗಗಳಿಗೂ ೫೦೦೦ ಕೋಟಿ ಘೋಷಿಸಿ. ಮುಸಲ್ಮಾನರನ್ನೇ ತಲೆಯ ಮೇಲೆ ಕೂರಿಸಿಕೊಳ್ಳುವ ಪ್ರಯತ್ನ ಯಾಕೆ ಎಂದು ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.

Next Article