For the best experience, open
https://m.samyuktakarnataka.in
on your mobile browser.

ಹಳಿತಪ್ಪಿದ ಚಾರ್‌ಮಿನಾರ್‌ ಎಕ್ಸ್‌ಪ್ರೆಸ್‌

12:19 PM Jan 10, 2024 IST | Samyukta Karnataka
ಹಳಿತಪ್ಪಿದ ಚಾರ್‌ಮಿನಾರ್‌ ಎಕ್ಸ್‌ಪ್ರೆಸ್‌

ಹೈದರಾಬಾದ್:‌ ಚಾರ್‌ಮಿನಾರ್‌ ಎಕ್ಸ್‌ಪ್ರೆಸ್‌ ರೈಲು ತೆಲಂಗಾಣದ ನಾಂಪಳ್ಳಿ ರೈಲು ನಿಲ್ದಾಣದಲ್ಲಿ ಹಳಿ ತಪ್ಪಿದ್ದು, ಆರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಗ್ಗೆ 9ರ ಸುಮಾರಿಗೆ ಪ್ಲಾಟ್‌ಫಾರ್ಮ್ ಸಂಖ್ಯೆ ಐದತ್ತ ಸಾಗುತ್ತಿದ್ದ ರೈಲು ತನ್ನ ನಿಗದಿತ ಮಾರ್ಗವನ್ನು ದಾಟಿ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದು ಮೂರು ಬೋಗಿಗಳು ಹಳಿ ತಪ್ಪಿದ ಕಾರಣ ಈ ದುರ್ಘಟನೆ ಸಂಭವಿಸಿದೆ. ರೈಲಿನ ಮೂರು ಬೋಗಿಗಳು ಹಳಿ ತಪ್ಪಿದ ಕಾರಣ ಆರು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.