For the best experience, open
https://m.samyuktakarnataka.in
on your mobile browser.

ಧಾರವಾಡ: 24 ರಂದು “ಕರಿನೀರ ವೀರ” ಪ್ರದರ್ಶನ

11:41 AM Feb 21, 2024 IST | Samyukta Karnataka
ಧಾರವಾಡ  24 ರಂದು “ಕರಿನೀರ ವೀರ” ಪ್ರದರ್ಶನ

ಧಾರವಾಡ: ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾರ್ವಕರ್ ಬದುಕಿನ ಕಥಾನಕ ಕರಿನೀರ ವೀರ ನಾಟಕ ಪ್ರದರ್ಶನವನ್ನು ಧಾರವಾಡದಲ್ಲಿ ಇದೇ ಫೆಬ್ರವರಿ 24 ರಂದು ಪ್ರದರ್ಶನವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದ ವೀರ ಸಾವರ್ಕರ್ ಅವರ ಸಾಹಸ ಮತ್ತು ಸಂಗ್ರಾಮದ ಕಥೆಯನ್ನು ಜನರಿಗೆ ತಲುಪಿಸಲು ಕ್ಷಮತಾ ಸೇವಾ ಸಂಸ್ಥೆ ಹುಬ್ಬಳ್ಳಿ, ರಂಗಭೂಮಿ ಟ್ರಸ್ಟ್ ಕೊಡಗು ಇವರ ಸಹಯೋಗದಲ್ಲಿ ವೀರ ಸಾವರ್ಕರ್ ಅವರ ಬದುಕಿನ ಕಥನ “ಕರಿನೀರ ವೀರ” ನಾಟಕ ಖ್ಯಾತ ನಾಟಕಕಾರ ಶ್ರೀ ಅಡ್ಡಂಡ ಕಾರ್ಯಪ್ಪ ಅವರ ನಿರ್ದೇಶನದಲ್ಲಿ ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಇದೇ ಫೆಬ್ರವರಿ 24 ರಂದು ಪ್ರದರ್ಶನವಾಗಲಿದೆ ಎಂದಿದ್ದಾರೆ.

ನಾಟಕ ಪ್ರದರ್ಶನ ಸ್ಥಳ: ಸನ್ನಿಧಿ ಕಲಾಕ್ಷೇತ್ರ, ಜೆ.ಎಸ್.ಎಸ್. ಆವರಣ, ಧಾರವಾಡ
ಸಮಯ: ಸಂಜೆ 5 ಗಂಟೆಗೆ