For the best experience, open
https://m.samyuktakarnataka.in
on your mobile browser.

ಕೋವಿಡ್ ತಜ್ಞರೊಂದಿಗೆ ಸಭೆ: ಸಿಎಂ

01:29 PM Dec 17, 2023 IST | Samyukta Karnataka
ಕೋವಿಡ್ ತಜ್ಞರೊಂದಿಗೆ ಸಭೆ  ಸಿಎಂ

ಹುಬ್ಬಳ್ಳಿ : ದೇಶದಲ್ಲಿ ಕೋವಿಡ್ ಸೋಂಕು ಆತಂಕ ವಿಚಾರವಾಗಿ ರಾಜ್ಯದಲ್ಲಿ ತಜ್ಞರ ಜೊತೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾನು‌ ನಿನ್ನೆ ಆರೋಗ್ಯ ಸಚಿವರ ಜೊತೆ ಮಾತಾಡಿದ್ದೇ‌ನೆ. ತಜ್ಞರ ಜೊತೆ ಮೀಟಿಂಗ್ ಮಾಡಲು ಸೂಚಿಸಿದ್ದೇನೆ. ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು‌. ಮಾಲೂರಿನಲ್ಲಿ ಮಲ ಕ್ಲೀನ್ ಮಾಡಲು ಮಕ್ಕಳ ಬಳಕೆ ವಿಚಾರ ನನ್ನ ಗಮನಕ್ಕೆ ಬಂದಿದೆ. ಸಂಪೂರ್ಣ ವರದಿ ತರಿಸಿಕೊಂಡು ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದರು.