For the best experience, open
https://m.samyuktakarnataka.in
on your mobile browser.

ಸಂಯುಕ್ತ ಕರ್ನಾಟಕ ನೌಕರ ಶಶಿಧರ ಹುಣಸೀಮರದ ನಿಧನ

10:33 AM May 22, 2024 IST | Samyukta Karnataka
ಸಂಯುಕ್ತ ಕರ್ನಾಟಕ ನೌಕರ ಶಶಿಧರ ಹುಣಸೀಮರದ ನಿಧನ

ಹುಬ್ವಳ್ಳಿ: ಸಂಯುಕ್ತ ಕರ್ನಾಟಕ ಪತ್ರಿಕೆಯ ಜಾಹೀರಾತು ವಿಭಾಗದ ಸಿಬ್ಬಂದಿ ಶಶಿಧರ ಹುಣಸೀಮರದ ಇಂದು ನಿಧನರಾದರು.
ಸುಮಾರು ಎರಡು ದಶಕಕ್ಕೂ ಹೆಚ್ಚು ಕಾಲ ಸಂಯುಕ್ತ ಕರ್ನಾಟಕದ ಸಂಪಾದಕೀಯ ಹಾಗೂ ಜಾಹೀರಾತು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಇಂದು ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು-ಬಳಗ ಇದ್ದಾರೆ.