For the best experience, open
https://m.samyuktakarnataka.in
on your mobile browser.

ನಮ್ಮ ಎಲ್ಲ ಆರೋಪಗಳಿಗೆ ಪುರಾವೆ ಸಿಕ್ಕಿವೆ

08:32 PM Aug 23, 2024 IST | Samyukta Karnataka
ನಮ್ಮ ಎಲ್ಲ ಆರೋಪಗಳಿಗೆ ಪುರಾವೆ ಸಿಕ್ಕಿವೆ

ಧಾರವಾಡ: ಮುಡಾ ಹಗರಣ, ವಾಲ್ಮೀಕಿ ಹಗರಣದ ಬಗ್ಗೆ ನಾವು ಮಾಡಿದ ಎಲ್ಲ ಆರೋಪಗಳಿಗೆ ಪುರಾವೆ ಸಿಕ್ಕಿವೆ. ಆ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲಾ ಪಂಚಾಯ್ತಿಗಳಲ್ಲೂ ಅವ್ಯವಹಾರ ನಡೆದಿದೆ ಎಂದು ಅರುಣಕುಮಾರ ಅವರು ಆರೋಪ ಮಾಡಿದ್ದಾರೆ ಎಂಬ ವಿಚಾರ ಗೊತ್ತಾಗಿದೆ. ಆ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್‌ಗೂ ಭ್ರಷ್ಟಾಚಾರಕ್ಕೂ ಅವಿನಾಭಾವ ಸಂಬಂಧವಿದೆ. ಅದು ಭ್ರಷ್ಟಾಚಾರ ಇಲ್ಲದೇ ಆಡಳಿತ ಕೊಡಲು ಸಾಧ್ಯವಿಲ್ಲ. ಹಿಂದಿನಿಂದಲೂ ನಾವು ಹೇಳುತ್ತ ಬಂದಿದ್ದೆವು. ರಾಜ್ಯದ ಈ ಸರ್ಕಾರವನ್ನು ಹೈಕಮಾಂಡ್ ಎಟಿಎಂ ಆಗಿ ಮಾಡಿಕೊಳ್ಳುತ್ತಿದೆ ಎಂದು ಅದೇ ಈ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಇರುವ ಉದ್ದೇಶ ಎಂದರು.