For the best experience, open
https://m.samyuktakarnataka.in
on your mobile browser.

ಅನುಮಾನಾಸ್ಪದ ಎರಡು ಪೆಟ್ಟಿಗೆ ಪತ್ತೆ

07:49 PM Nov 05, 2023 IST | Samyukta Karnataka
ಅನುಮಾನಾಸ್ಪದ ಎರಡು ಪೆಟ್ಟಿಗೆ ಪತ್ತೆ

ಶಿವಮೊಗ್ಗ: ನಗರದ ಮುಖ್ಯ ರೈಲ್ವೆ ನಿಲ್ದಾಣ ಆವರಣದ ಸಮೀಪ ಭಾನುವಾರ ಗೋಣಿ ಚೀಲದಲ್ಲಿ ಮುಚ್ಚಿದ್ದ ಎರಡು ಪೆಟ್ಟಿಗೆಗಳು ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ಬಾಂಬ್ ಪತ್ತೆ ದಳದವರು ದೌಡಾಯಿಸಿದ್ದಾರೆ.
ರೈಲ್ವೆ ನಿಲ್ದಾಣ ಪಾರ್ಕಿಂಗ್ ಸಮೀಪದ ಕಾಂಪೌಂಡ್ ಬಳಿ ಎರಡು ಬಾಕ್ಸ್‌ಗಳು ಪತ್ತೆಯಾಗಿವೆ. ಅನುಮಾನಾಸ್ಪದ ಸ್ಥಿತಿಯಲ್ಲಿದ್ದ ಪೆಟ್ಟಿಗೆಗಳನ್ನು ಗಮನಿಸಿದ ಸಾರ್ವಜನಿಕರು, ರೈಲ್ವೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಅವರು ಜಯನಗರ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಜಯನಗರ ಠಾಣೆ ಪೊಲೀಸರು ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳವನ್ನು ಸ್ಥಳಕ್ಕೆ ಕರೆಯಿಸಿಕೊಂಡು ತಪಾಸಣೆ ನಡೆಸುತ್ತಿದ್ದಾರೆ. ಪೆಟ್ಟಿಗೆಗಳಿರುವ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಎರಡು ಪೆಟ್ಟಿಗೆಗಳಿಗೆ ಬೀಗ ಹಾಕಲಾಗಿದ್ದು, ಗೋಣಿ ಚೀಲದಿಂದ ಹೊಲಿಗೆ ಹಾಕಲಾಗಿದೆ. ಬೆಂಗಳೂರಿನಿಂದ ವಿಶೇಷ ತಪಾಸಣಾ ತಂಡವನ್ನು ಕರೆಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.