For the best experience, open
https://m.samyuktakarnataka.in
on your mobile browser.

ಆಕಸ್ಮಿಕ ಬೆಂಕಿ: ಬಣವೆ ಭಸ್ಮ

08:58 AM Dec 19, 2023 IST | Samyukta Karnataka
ಆಕಸ್ಮಿಕ ಬೆಂಕಿ  ಬಣವೆ ಭಸ್ಮ

ಇಳಕಲ್: ಹೊಲದಲ್ಲಿ ಶೇಖರಿಸಿದ್ದ ಜೋಳದ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟವಾದ ಘಟನೆ ತಾಲೂಕಿನ ಕೆಸರಬಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ವಿರುಪಾಕ್ಷಗೌಡ ಗೌಡರ ಅವರ ಹೊಲದಲ್ಲಿನ ಬಣವೆಗೆ ಯಾರೋ ಕಿಡಿಗೇಡಿಗಳು ಎಸೆದ ಸಿಗರೇಟ್ ಕಿಡಿಯಿಂದ ಬೆಂಕಿ ಹತ್ತಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ . ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿದರೂ ಬೆಂಕಿಯ ಉರಿನಾಲಿಗೆಗೆ ಬಣವೆಗಳು ಭಸ್ಮಗೊಂಡಿವೆ. ಇಳಕಲ್ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪಿಎಸ್ ಐ ಲಕ್ಷ್ಮೀ ಕಾಂತ ಬಾನಿಗೋಳ ತನಿಖೆ ನಡೆಸಿದ್ದಾರೆ