For the best experience, open
https://m.samyuktakarnataka.in
on your mobile browser.

ಇವರ ಸಾಧನೆ ಕೇವಲ 67% ಮಾತ್ರ

12:55 PM Feb 05, 2024 IST | Samyukta Karnataka
ಇವರ ಸಾಧನೆ ಕೇವಲ 67  ಮಾತ್ರ

ಬೆಂಗಳೂರು: ಸಿದ್ದರಾಮಯ್ಯ ಅವರ ಸರ್ಕಾರ ಡಿಸೆಂಬರ್ ಅಂತ್ಯಕ್ಕೆ ಕೇವಲ ₹1,61,000 ಕೋಟಿ ಗುರಿ ತಲುಪಿದೆ, ಅಂದರೆ ಇವರ ಸಾಧನೆ ಕೇವಲ 67% ಮಾತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸಿದ್ದರಾಮಯ್ಯ ಅವರ ಸರ್ಕಾರ ₹2,38,000 ಕೋಟಿ ರಾಜಸ್ವ ಸ್ವೀಕೃತಿಯ ಗುರಿ ಇಟ್ಟುಕೊಂಡಿತ್ತು. ಆದರೆ ಡಿಸೆಂಬರ್ ಅಂತ್ಯಕ್ಕೆ ಕೇವಲ ₹1,61,000 ಕೋಟಿ ಗುರಿ ತಲುಪಿದೆ, ಅಂದರೆ ಇವರ ಸಾಧನೆ ಕೇವಲ 67% ಮಾತ್ರ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಿಸೆಂಬರ್ ಅಂತ್ಯಕ್ಕೆ 82% ಗುರಿ ಸಾಧಿಸಲಾಗಿತ್ತು. ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಬಿಟ್ಟು ತಮ್ಮ ಸರ್ಕಾರದ ಗುರಿ ಏಕೆ ತಲುಪಲಿಲ್ಲ ಎಂಬುದರ ಬಗ್ಗೆ ರಾಜ್ಯದ ಜನರಿಗೆ ಉತ್ತರ ನೀಡಬೇಕೆಂದು ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ವಿಜಯೇಂದ್ರ ಹೇಳಿದ್ದಾರೆ.