For the best experience, open
https://m.samyuktakarnataka.in
on your mobile browser.

ಮೋದಿ ಕರೆದರೆ ಈಗ ಮುನ್ನೂರು ಜನರೂ ಬರುವುದಿಲ್ಲ

05:02 PM May 06, 2024 IST | Samyukta Karnataka
ಮೋದಿ ಕರೆದರೆ ಈಗ ಮುನ್ನೂರು ಜನರೂ ಬರುವುದಿಲ್ಲ

ಮಹಾಲಿಂಗಪುರ: ಮೋದಿ ದುರ್ಬಲ ಪ್ರಧಾನ ಮಂತ್ರಿ, ಬರೀ ಸುಳ್ಳು ಹೇಳುತ್ತಾರೆ ಅವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ, ಈಗ ಅವರು ಕರೆದರೆ ಮುನ್ನೂರು ಜನರೂ ಬರುವುದಿಲ್ಲ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ರನ್ನಬೆಳಗಲಿ ಮಹಾಲಿಂಗೇಶ್ವರ ಸಮುದಾಯ ಭವನದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ, ರೈತರಿಗೆ, ಬಡವರಿಗೆ, ಯುವಕರಿಗೆ ಏನನ್ನೂ ಕೊಡುಗೆ ನೀಡದ ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದರು.