For the best experience, open
https://m.samyuktakarnataka.in
on your mobile browser.

ರಾಜಕಾರಣದಲ್ಲಲ್ಲ ಈ ದೇಶದಲ್ಲೇ ಇರಲು ನಾಲಾಯಕ್‌

05:40 PM Feb 01, 2024 IST | Samyukta Karnataka
ರಾಜಕಾರಣದಲ್ಲಲ್ಲ ಈ ದೇಶದಲ್ಲೇ ಇರಲು ನಾಲಾಯಕ್‌

ಬೆಂಗಳೂರು: ಅಖಂಡತೆಯನ್ನು ಛಿದ್ರಮಾಡುವ ಮನಸ್ಥಿತಿ ಇರುವವರು ಕೇವಲ ರಾಜಕಾರಣದಲ್ಲಲ್ಲ ಈ ದೇಶದಲ್ಲೇ ಇರಲು ನಾಲಾಯಕ್ಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಕಾಂಗ್ರೆಸ್‌ನ ಸಂಸದ ಡಿ.ಕೆ.ಸುರೇಶ್‌ ಬಜೆಟ್‌ ಕುರಿತು ಪ್ರತಿಕ್ರಿಯೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಮಾತೆತ್ತಿದರೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ನಾವು ಎಂದು ಬೊಗಳೆ ಬಿಡುವ ಕಾಂಗ್ರೆಸ್ ಪಕ್ಷ ಈಗ ದೇಶ ಒಡೆಯುವ ದೇಶದ್ರೋಹದ ಮಾತಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡು. 200 ವರ್ಷಗಳ ಕಾಲ ಅದೆಷ್ಟೋ ಹೋರಾಟಗಳು, ಲೆಕ್ಕವಿಲ್ಲದಷ್ಟು ಸ್ವಾತಂತ್ರ ಹೋರಾಟಗಾರರ ತ್ಯಾಗ, ಬಲಿದಾನಗಳಿಂದ ನಮ್ಮ ದೇಶಕ್ಕೆ ಬಂದ ಸ್ವಾತಂತ್ರ, ಸಾರ್ವಭೌಮತೆ, ಅಖಂಡತೆಯನ್ನು ಛಿದ್ರಮಾಡುವ ಮನಸ್ಥಿತಿ ಇರುವವರು ಕೇವಲ ರಾಜಕಾರಣದಲ್ಲಲ್ಲ ಈ ದೇಶದಲ್ಲೇ ಇರಲು ನಾಲಾಯಕ್ಕು. ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರ ಈ ದೇಶದ್ರೋಹಿ ಹೇಳಿಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮಾಡಿದ ಅಪಮಾನ. "ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ" ಎಂದು ನಾಡಗೀತೆಯ ಮೂಲಕ ಕನ್ನಡಾಂಬೆ ಭಾರತಾಂಬೆಯ ನೆಚ್ಚಿನ ಮಗಳು ಎಂದು ಸಾರಿದ ಕುವೆಂಪು ಅವರ ಚಿಂತನೆಗೆ ಮಾಡಿದ ಅವಮಾನ.
ಈ ನಾಡದ್ರೋಹಿ, ದೇಶದ್ರೋಹಿ ಕಾಂಗ್ರೆಸ್ ಪಕ್ಷವನ್ನ ಈ ದೇಶದ ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಭಾರತ್ ಜೊಡೋ ಎಂದು ಬಾಯಿ ಮಾತಲ್ಲಿ ಹೇಳುತ್ತಾ ಒಳಗೊಳಗೆ ಭಾರತ್ ತೋಡೋ ಮಾಡುವ ಅಜೆಂಡಾ ಇಟ್ಟುಕೊಂಡಿರುವ ಕಾಂಗ್ರೆಸ್ ಪಕ್ಷದ ಹುನ್ನಾರ ಸಫಲವಾಗಲು ಭಾರತೀಯರು ಎಂದಿಗೂ ಬಿಡುವುದಿಲ್ಲ ಎಂದಿದ್ದಾರೆ.