For the best experience, open
https://m.samyuktakarnataka.in
on your mobile browser.

ರಾಜಕೀಯ ದ್ವೇಷಕ್ಕೆ ತತ್ಸಮಾನ ಪದವೇ "ಕಾಂಗ್ರೆಸ್"

04:03 PM Jan 04, 2024 IST | Samyukta Karnataka
ರಾಜಕೀಯ ದ್ವೇಷಕ್ಕೆ ತತ್ಸಮಾನ ಪದವೇ  ಕಾಂಗ್ರೆಸ್

ಬೆಂಗಳೂರು: 7 ವರ್ಷ ಹಳೆಯ ದತ್ತಪೀಠ ಪ್ರಕರಣವನ್ನು ಮರುತನಿಖೆ ಮಾಡಲು ಹುನ್ನಾರ ನಡೆಸಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಸಿದ್ದರಾಮಯ್ಯ = ಹಿಂದೂ ವಿರೋಧಿ! ತನಿಖೆಯಾಗಿರುವ ಪ್ರಕರಣವನ್ನು ಮಾರುತನಿಖೆ ನೆಪದಲ್ಲಿ ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುವುದೊಂದು ಕರ್ನಾಟಕ ಪೋಲೀಸರ ಈಗಿನ ಕೆಲಸ ಆಗಿದೆ. ಲೋಕಸಭೆ ಚುನಾವಣೆ ಸೋಲುವ ಹತಾಶೆಯಿಂದ ಸಿದ್ದರಾಮಯ್ಯನವರು ಈ ರೀತಿ ನಡೆದುಕೊಳ್ಳುತ್ತಿರುವುದು. ರಾಜಕೀಯ ದ್ವೇಷಕ್ಕೆ ತತ್ಸಮಾನ ಪದವೇ "ಕಾಂಗ್ರೆಸ್" ಎಂದು ಬರೆದುಕೊಂಡಿದ್ದಾರೆ.