ನಸುಕಿನ ಜಾವ ಅಪ್ರಾಪ್ತೆಯ ಬರ್ಬರ ಕೊಲೆ
08:52 AM May 15, 2024 IST
|
Samyukta Karnataka
ಹುಬ್ಬಳ್ಳಿ : ಇಲ್ಲಿನ ಘಂಟಿಕೇರಿಯಲ್ಲಿ ನಸುಕಿನ ಜಾವ ಅಪ್ತಾಪ್ತೆಗೆ ಚಾಕು ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಹತ್ಯೆಯಾದ ಯುವತಿ ಅಂಜಲಿ ಎಂಬುವಳಾಗಿದ್ದಾಳೆ. ಈಕೆ ಘಂಟಿಕೇರಿಯಲ್ಲಿರುವ ತನ್ನ ಅಜ್ಜಿಯ ಮನೆಯಲ್ಲಿದ್ದಳು. ನಸುಕಿನ ಜಾವ 4.30 ರ ಸುಮಾರಿಗೆ ದುಷ್ಕರ್ಮಿಗಳು ಇವರ ಮನೆ ಕದ ತಟ್ಟಿದ್ದಾರೆ. ಅಂಜಲಿಯೇ ಎದ್ದು ಕದ ತೆಗೆಯುತ್ತಿದ್ದಂತೆಯೇ ಆಕೆಗೆ ಚಾಕಿ ಇರಿದು ಹತ್ಯೆ ಮಾಡಿದ್ದಾರೆ ಎಂದು ತಿಳಿದಿದೆ.
ಬಾಲಕಿಯನ್ನು ಯುವಕನೊಬ್ಬ ಪ್ರೀತಿ ಪೀಡಿಸುತ್ತಿದ್ದನಂತೆ. ಬಾಲಕಿ ಪ್ರೀತಿ ನಿರಾಕರಣೆ ಮಾಡಿದ್ದಳು. ಆತನ ಕಿರುಕುಳಕ್ಕೆ ಬಾಲಕಿ ತನ್ನ ಅಜ್ಜಿ ಮನೆಗೆ ಬಂದಿದ್ದಳು ಎನ್ನಲಾಗಿದೆ. ಆತನೇ ಬಾಲಕಿಯನ್ನು ಹತ್ಯೆ ಗೈದಿದ್ದಾನೆ ಎಂದು ಶಂಕಿಸಲಾಗಿದೆ.
ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
Next Article