For the best experience, open
https://m.samyuktakarnataka.in
on your mobile browser.

ನಾರಿ "ಶಕ್ತಿ"ಯ ಪಯಣ ಮತ್ತಷ್ಟು ಇತಿಹಾಸ ಸೃಷ್ಟಿಸಲಿ

03:27 PM Jun 01, 2024 IST | Samyukta Karnataka
ನಾರಿ  ಶಕ್ತಿ ಯ ಪಯಣ ಮತ್ತಷ್ಟು ಇತಿಹಾಸ ಸೃಷ್ಟಿಸಲಿ

ಬೆಂಗಳೂರು: ನಾರಿ ಶಕ್ತಿ ಯೋಜನೆ ತನ್ನ ಉದ್ದೇಶವನ್ನು ಅತ್ಯಂತ ಯಶಸ್ವಿಯಾಗಿ ಈಡೇರಿಸುತ್ತ ಮುನ್ನಡೆಯುತ್ತಿರುವುದು ಸಂತಸ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಶಕ್ತಿ ಯೋಜನೆ ಜಾರಿಗೊಂಡ ನಂತರದಿಂದ ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಸಹಭಾಗಿತ್ವದ ಪ್ರಮಾಣ ಹೆಚ್ಚಳವಾಗಿದೆ ಎಂದು ಆರ್ಥಿಕ ನೀತಿ ಸಂಸ್ಥೆ, ಜಸ್ಟ್ ಜಾಬ್ ನೆಟ್ವರ್ಕ್ ಸಹಯೋಗದ ಸಮೀಕ್ಷಾ ವರದಿ ಬಹಿರಂಗಗೊಳಿಸಿದೆ.

ನಾಡಿನ ಸ್ವಾಭಿಮಾನಿ ಮಹಿಳೆಯರಿಗೆ ಸ್ವಾವಲಂಬನೆಯ ಬಲ ತುಂಬಬೇಕು ಎಂಬ ಆಶಯದೊಂದಿಗೆ ನಾವು ಜಾರಿಗೊಳಿಸಿರುವ ಈ ಯೋಜನೆ ತನ್ನ ಉದ್ದೇಶವನ್ನು ಅತ್ಯಂತ ಯಶಸ್ವಿಯಾಗಿ ಈಡೇರಿಸುತ್ತ ಮುನ್ನಡೆಯುತ್ತಿರುವುದು ಯೋಜನೆ ಜಾರಿಗೆ ಕೊಟ್ಟ ನನಗೆ ಸಂತಸದ ಸಂಗತಿ.

ಸಬಲೀಕರಣದೆಡೆಗಿನ ನಾರಿ "ಶಕ್ತಿ"ಯ ಪಯಣ ಮತ್ತಷ್ಟು ಇತಿಹಾಸಗಳನ್ನು ಸೃಷ್ಟಿಸಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.