For the best experience, open
https://m.samyuktakarnataka.in
on your mobile browser.

ನಾವು ಹಿಂದೂಗಳಲ್ಲ

07:51 PM Jan 10, 2024 IST | Samyukta Karnataka
ನಾವು ಹಿಂದೂಗಳಲ್ಲ

ಬಾಗಲಕೋಟೆ: ನಾವು ಹಿಂದೂಗಳಲ್ಲ, ವೈದಿಕ ಪರಂಪರೆಯ ಭಾಗವಲ್ಲ ಎಂದು ಸ್ವಾಭಿಮಾನಿ ಶರಣಮೇಳದ ರೂವಾರಿ ಡಾ. ಚನ್ನಬಸವಾನಂದ ಸ್ವಾಮೀಜಿ ಮತ್ತೊಮ್ಮೆ ಚರ್ಚಾಸ್ಪದ ಹೇಳಿಕೆಯನ್ನು ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಂತ್ರ ಲಿಂಗಾಯತ ಧರ್ಮ ಸ್ಥಾಪನೆಯೇ ನಮ್ಮ ಗುರಿ. ಸ್ವತಂತ್ರ ಧರ್ಮಕ್ಕಾಗಿ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು. ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಅವರಿಂದ ನ್ಯಾಯ ದೊರಕುವುದಿಲ್ಲ. ಲಿಂಗಾಯತ ಸ್ವತಂತ್ರ ಧರ್ಮ ವಿರೋಧಿಸಿದವರೊಂದಿಗೆ ಬಸವ ಧರ್ಮಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ರಾಜಿಯಾಗಿದ್ದಾರೆ. ೨೦೧೮ರಲ್ಲಿ ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಸಿಎಂ ಸಿದ್ದರಾಮಯ್ಯ ಶಿಫಾರಸ್ಸು ಮಾಡಿದ್ದರು. ಆದರೆ ಕೇಂದ್ರ ಸರ್ಕಾರ ಅದನ್ನು ಒಪ್ಪಿಲ್ಲ. ಹೀಗಾಗಿ ಮರುಪ್ರಸ್ತಾವನೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರಲು ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ ಕೈಗೊಳ್ಳಲಾಗುತ್ತದೆ ಎಂದರು.