For the best experience, open
https://m.samyuktakarnataka.in
on your mobile browser.

ನುಡಿದಂತೆ 10 ಕೆಜಿಗೆ 34 ರೂ.ಗಳಂತೆ ಹಣ ಕೊಡಿ

01:54 PM Jun 29, 2023 IST | Samyukta Karnataka
ನುಡಿದಂತೆ 10 ಕೆಜಿಗೆ 34 ರೂ ಗಳಂತೆ ಹಣ ಕೊಡಿ

ಮಡಿಕೇರಿ: ಅನ್ನಭಾಗ್ಯ ಯೋಜನೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ ಎಂದು ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಘೋಷಣೆ ವೇಳೆ ನೀವು 10 ಕೆಜಿ ಕೊಡುತ್ತೇವೆ ಎಂದು ಹೇಳಿದ್ದೀರಿ ಈಗ ಯಾಕೆ 5 ಕೆಜಿ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಈ ಹಿಂದೆಯೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊಡುತ್ತಿದ್ದ ಅಕ್ಕಿಗೆ ಅನ್ನಭಾಗ್ಯದ ಲೇಬಲ್ ಹಾಕಿದ್ರಿ, ನೀವು ನುಡಿದಂತೆ 10 ಕೆ.ಜಿಗೆ 34 ರೂ.ಗಳಂತೆ ಹಣ ಕೊಡಿ ಎಂದಿದ್ದಾರೆ.