ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನೇಹಾ ಹತ್ಯೆ ಖಂಡಿಸಿ: ವಿದ್ಯಾರ್ಥಿಗಳ ಪ್ರತಿಭಟನೆ

11:18 AM Apr 19, 2024 IST | Samyukta Karnataka

ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿವಿಬಿ ಕಾಲೇಜಿನ ಮುಂದಿನ ಹು- ಧಾ ರಸ್ತೆ ಯಲ್ಲಿ ಎಬಿವಿಪಿ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಆರೋಪಿ ಫಯಾಜ್‌ಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದ ವಿವಿಧ ಭಾಗಗಳ ಎಬಿವಿಪಿ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.

ಕಮೀಶನರ್ ಬರಲೇಬೇಕು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಪಟ್ಟು : ಕಮೀಶನರ್ ಇಲ್ಲಿಗೆ ಬರಬೇಕು.. ನಮಗೆ ಉತ್ತರ ಕೊಡಬೇಕು… ಬರೋವರೆಗೂ ಇಲ್ಲಿಂದ ಕದಲಲ್ಲ…
ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿವಿಬಿ ಕಾಲೇಜಿನ ಮುಂದೆ ಧರಣಿ ನಡೆಸುತ್ತಿರುವ ವಿದ್ಯಾರ್ಥಿಗಳು ಹಿಡಿದ ಪಟ್ಟಿದು.

ಕಳೆದ ಒಂದು ತಾಸಿನಿಂದ ಧರಣಿ ನಡೆಸುತ್ತಿದ್ದೇವೆ. ಕಮೀಶನರ್ ಇನ್ನೂ ಬಂದಿಲ್ಲ. ಇಲ್ಲಿಗೆ ಬಂದು ನಮಗೆ ಉತ್ತರ ಕೊಡಲಿ. ನಮಗೆ ರಕ್ಷಣೆ ಕೊಡುವವರ್ಯಾರು ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು.
ಕಮೀಶರ್ ಕೂಡಾ ಒಬ್ಬ ಮಹಿಳೆ. ಹೆಣ್ಣುಮಗುವಿನ ಭೀಕರ ಹತ್ಯೆಗೆ ಉತ್ತರಿಸಲು ಬರಲು ಆಗುವುದಿಲ್ಲವೇ ಎಂದು ಎಬಿವಿಪಿ ವಿದ್ಯಾರ್ಥಿ ಸಂಘಟನೆ ಮುಖಂಡರು ಆಕ್ರೋಶ ಹೊರಹಾಕಿದರು.

ಕಮೀಶನರ್ ಬರುವವರೆಗೂ ನಾವು ಇಲ್ಲಿಂದ ಕದಲಲ್ಲ. ಎಷ್ಟೇ ಹೊತ್ತಾದರೂ ಸರಿ ಧರಣಿ ನಡೆಸುತ್ತೇವೆ ಎಂದು ಪೊಲೀಸರ್ ಅಧಿಕಾರಿಗಳಿಗೆ ವಿದ್ಯಾರ್ಥಿ - ವಿದ್ಯಾರ್ಥಿನಿಯರು ಹೇಳಿದರು.

Next Article