ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪತ್ನಿಯ ಶೀಲ ಶಂಕಿಸಿ ಕತ್ತು ಕೊಯ್ದು ಬರ್ಬರ‌ ಕೊಲೆ

12:55 PM Jan 12, 2024 IST | Samyukta Karnataka

ಚಿತ್ರದುರ್ಗ: ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಹೆಂಡತಿಯ ಕತ್ತು ಕೊಯ್ದು ಬರ್ಬರವಾಗಿ‌ ಕೊಲೆ ಮಾಡಿರುವ ಘಟನೆ ನಗರದ ನೆಹರು ನಗರ ಬಡಾವಣೆಯಲ್ಲಿ ಕಳೆದ ರಾತ್ರಿ ನಡೆದಿದೆ.
ರೇಣುಕಾ(40) ಮೃತ ದುರ್ದೈವಿಯಾಗಿದ್ದು, ಕೊಲೆ ಮಾಡಿರುವ ಪತಿ ಮಂಜುನಾಥ್ ತಲೆ ಮರೆಸಿಕೊಂಡಿದ್ದಾನೆ.
ಕಳೆದ 20 ವರ್ಷಗಳ ಹಿಂದೆ ವಿವಾಹವಾಗಿದ್ದ ರೇಣುಕಾ ಹಾಗೂ ಮಂಜುನಾಥ್ ನೆಹರು ನಗರದ 1 ನೇ ಕ್ರಾಸ್ ನಲ್ಲಿ ಮನೆಯೊಂದ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ರೇಣುಕಾ ಮಂಜುನಾಥ್ ಅವರಿಗೆ 2 ಹೆಣ್ಣು ಮಕ್ಕಳಿದ್ದು, ಇವರಿಬ್ಬರಿಗೂ ಮದುವೆ ಮಾಡಿಕೊಡಲಾಗಿದೆ. ಹೆಣ್ಣುಮಕ್ಕಳಿಬ್ಬರು ಬೇರೆ ಊರಿನಲ್ಲಿ ವಾಸವಿದ್ದರಿಂದ ನೆಹರು ನಗರದ ಮನೆಯಲ್ಲಿ ರೇಣುಕಾ ಮಂಜುನಾಥ್ ಇಬ್ಬರೆ ವಾಸವಿದ್ದರು. ಇತ್ತಿಚೀನ ದಿನಗಳಲ್ಲಿ ರೇಣುಕಾ ಅವರ ಶೀಲವನ್ನು ಶಂಕಿಸಿ ಮಂಜುನಾಥ್ ಪ್ರತಿದಿನ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಗುರುವಾರ ರಾತ್ರಿ ಎಂದಿನಂತೆ ಮಂಜುನಾಥ್ ಗಲಾಟೆ ಮಾಡಿದ್ದಾನೆ. ನಂತರ ರೇಣುಕಾ ಮಲಗಿದ್ದ ವೇಳೆ ಮಂಜುನಾಥ್ ಚಾಕುವಿನಿಂದ ಹೆಂಡತಿ ರೇಣುಕಾ ಅವರ ಕತ್ತನ್ನು ಕೊಯ್ದು ಕೊಲೆ ಮಾಡಿ, ಮನೆಗೆ ಬೀಗವನ್ನು ಹಾಕಿಕೊಂಡು ಪರಾರಿಯಾಗಿದ್ದಾನೆ. ಪಕ್ಕದ ಮನೆಯಲ್ಲೇ ವಾಸವಿದ್ದ ರೇಣುಕಾ ಅವರು ತಾಯಿ ಬೆಳಗ್ಗೆಯಿಂದ ಪೋನ್ ಮಾಡಿದ್ದಾರೆ. ಪೋನ್ ಯಾವುದೇ ಸ್ಪಂದನೆ ಸಿಗದ ಕಾರಣ ಮತ್ತೊಂದು ಕೀ ಯನ್ನು ಬಳಸಿ ಮನೆಯ ಬೀಗವನ್ನು ತೆಗೆದು ನೋಡಿದ್ದಾಗ ರೇಣುಕಾ ಕೊಲೆಯಾಗಿರುವುದು ಪತ್ತೆಯಾಗಿದೆ. ವಿಷಯ ತಿಳಿದ ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದು, ಆರೋಪಿ ಮಂಜುನಾಥ್ ಗಾಗಿ ಹುಡುಕಾಟ ನಡೆಸಿದ್ದಾರೆ. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Next Article