ಪದಗಳಲ್ಲಿ ವರ್ಣಿಸಲಾಗದಷ್ಟು ಶಾಂತಿ…
04:28 PM Feb 12, 2024 IST
|
Samyukta Karnataka
ಅಯೋಧ್ಯೆ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನು ಹಂಚಿಕೊಂಡಿರುವ ಅವರು ಶ್ರೀರಾಮ ಮಂದಿರದಲ್ಲಿ ರಾಮನ ದಿವ್ಯ ದರ್ಶನವನ್ನು ಪಡೆಯುವ ಸೌಭಾಗ್ಯ ನನಗೆ ಸಿಕ್ಕಿತು.
ಈ ಸಂದರ್ಭದಲ್ಲಿ ಭಗವಂತ ಜೀ ಮತ್ತು ಅವರ ಕುಟುಂಬದವರು ಉಪಸ್ಥಿತರಿದ್ದರು. ಎಲ್ಲರೂ ಒಟ್ಟಾಗಿ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀ ರಾಮ್ ಜಿ ಅವರ ದರ್ಶನವನ್ನು ಪಡೆದರು ಮತ್ತು ದೇಶದ ಪ್ರಗತಿ ಮತ್ತು ಎಲ್ಲಾ ಮಾನವಕುಲದ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು. ಭಗವಾನ್ ಶ್ರೀ ರಾಮಚಂದ್ರ ಎಲ್ಲರಿಗೂ ಅನುಗ್ರಹಿಸಲಿ ಎಂದು ಬರೆದು ಕೊಂಡಿದ್ದಾರೆ. ಇನ್ನು ಅಯೋಧ್ಯೆಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿರುವ ಅವರು ನಮ್ಮ ಕುಟುಂಬಗಳೊಂದಿಗೆ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ್ದೇವೆ. ರಾಮ್ ಲಲ್ಲಾನ ದರ್ಶನವನ್ನು ಪಡೆದ ನಂತರ ನಾವು ಪದಗಳಲ್ಲಿ ವರ್ಣಿಸಲಾಗದಷ್ಟು ಶಾಂತಿಯನ್ನು ಅನುಭವಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.
Next Article