For the best experience, open
https://m.samyuktakarnataka.in
on your mobile browser.

ಪಾಕಿಸ್ತಾನ ಪರ ಘೋಷಣೆ ಖಂಡನೀಯ- ಸಚಿವ ಚಲುವರಾಯಸ್ವಾಮಿ

12:29 PM Feb 29, 2024 IST | Samyukta Karnataka
ಪಾಕಿಸ್ತಾನ ಪರ ಘೋಷಣೆ ಖಂಡನೀಯ  ಸಚಿವ ಚಲುವರಾಯಸ್ವಾಮಿ

ಶ್ರೀರಂಗಪಟ್ಟಣ : ವಿಧಾನಸೌಧದಲ್ಲಿ‌ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಖಂಡನೀಯವಾಗಿದ್ದು, ಸರ್ಕಾರ ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ತಾಲ್ಲೂಕು ಕೃಷಿಕ‌ ಸಮಾಜ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ದೇಶ ದ್ರೋಹಿಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಈಗಾಗಲೇ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ಶಿಕ್ಷೆ ಆಗಬೇಕಿರುವುದು ಬೇಡ. ಈ ಸನ್ನಿವೇಶವನ್ನು ರಾಜಕೀಯವಾಗಿ‌ ಬಳಸಿಕೊಳ್ಳಲು ಮುಂದಾಗುತ್ತಿದೆ ಎಂದು ಕಿಡಿಕಾರಿದರು.

ಶಾಸಕ ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಲೋಕಸಭಾ ಸಂಭಾವ್ಯ ಅಭ್ಯರ್ಥಿ ಸ್ಟಾರ್ ಚಂದ್ರು ಸೇರಿದಂತೆ‌ ಕೃಷಿ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಕೃಷಿಕ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.