For the best experience, open
https://m.samyuktakarnataka.in
on your mobile browser.

ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆ!

09:18 AM Nov 07, 2023 IST | Samyukta Karnataka
ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆ

ಪುತ್ತೂರು (ದಕ್ಷಿಣ ಕನ್ನಡ): ನಗರದಲ್ಲಿ ನಿನ್ನೆ ತಡರಾತ್ರಿ ತಲವಾರ್‌ನಲ್ಲಿ "ಕಲ್ಲೇಗ ಟೈಗರ್ಸ್" ಹುಲಿ ತಂಡದ ನಾಯಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಅಕ್ಷಯ್ ಕಲ್ಲೇಗ ಹತ್ಯೆಗೀಡಾದ ಯುವಕ. ನಿನ್ನೆ ಪುತ್ತೂರು ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ತಲವಾರ್ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇಬ್ಬರಿಂದ ಕೃತ್ಯ ನಡೆದಿರುವ ಮಾಹಿತಿ ಇದ್ದು ಹಣಕಾಸಿನ ವಿಚಾರ ಇರಬಹದು ಎಂಬ ಶಂಕೆ ವ್ಯಕ್ತವಾಗಿದೆ. ಅಕ್ಷಯ್ ಕಲ್ಲೇಗ ನವರಾತ್ರಿ ಸಂದರ್ಭದಲ್ಲಿ ಹುಲಿ ವೇಷ ಸಂಘಟಿಸಿದ್ದರು. ಬಿಗ್ ಬಾಸ್‌ನಲ್ಲೂ ಹುಲಿ ವೇಷ ಕುಣಿಸಿದ್ದರು.