For the best experience, open
https://m.samyuktakarnataka.in
on your mobile browser.

ಪ್ರದರ್ಶನ ಮುಗಿಸಿದ ಕಾವೇರಿ

04:54 PM May 06, 2024 IST | Samyukta Karnataka
ಪ್ರದರ್ಶನ ಮುಗಿಸಿದ ಕಾವೇರಿ

ಬೆಂಗಳೂರು: ಸಿಂಗಲ್ ಸ್ಕ್ರೀನ್ ಥಿಯೇಟರ್ ಒಂದೊಂದಾಗಿ ಬಾಗಿಲು ಹಾಕುತ್ತಿದ್ದು, ಆ ಸಾಲಿಗೆ ಬೆಂಗಳೂರಿನ ಪ್ರಸಿದ್ಧ ಚಿತ್ರಮಂದಿರ "ಕಾವೇರಿ" ಸಹ ಸೇರಿಕೊಂಡಿದೆ.
ಸುಮಾರು 50 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕಾವೇರಿ ಚಿತ್ರ ಮಂದಿರ ಇದೀಗ ಶಾಶ್ವತವಾಗಿ ಮುಚ್ಚಲ್ಪಟ್ಟಿದೆ. ಡಾ. ರಾಜ್‌ಕುಮಾರ್ ನಟನೆಯ ‘ಬಂಗಾರದ ಪಂಜರ’ ಸಿನಿಮಾ 11 ಜನವರಿ 1974ರಲ್ಲಿ ಪ್ರದರ್ಶನದ ಮೂಲಕ ʻʻಕಾವೇರಿʼʼ ಚಿತ್ರಮಂದಿರ ಶುಭಾರಂಭ ಮಾಡಿತ್ತು. ಈ ವರ್ಷ ಜನವರಿ 11ಕ್ಕೆ 50 ವರ್ಷ ಪೂರೈಸಿ, ಗೋಲ್ಡನ್ ಜ್ಯುಬಿಲಿ ಸಂಭ್ರಮಾಚರಣೆಯಲ್ಲಿತ್ತು.