ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬನಶಂಕರಿ ರಥೋತ್ಸವ ಇಂದು

12:02 AM Jan 25, 2024 IST | Samyukta Karnataka

ಬಾದಾಮಿ: ಬಾದಾಮಿ-ಬನಶಂಕರಿದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ ಗುರುವಾರ ನಡೆಯಲಿದೆ. ಮುನ್ನಾ ದಿನವಾದ ಬುಧವಾರ ಪಲ್ಯೇದ ಹಬ್ಬದ ನಿಮಿತ್ತ ಶ್ರೀದೇವಿಗೆ ತರಹೇವಾರಿ ತರಕಾರಿಗಳಿಂದ ಅಲಂಕಾರ ಮಾಡಲಾಗಿತ್ತು.
೧೦೮ ವಿಧದ ತರಕಾರಿಗಳಿಂದ ದೇವಿಗೆ ಅಲಂಕಾರ ಮಾಡುವುದು ಜಾತ್ರಾ ಮಹೋತ್ಸವದ ಒಂದು ಪ್ರಮುಖ ಘಟ್ಟ. ಇದಕ್ಕೆ ಐತಿಹ್ಯವು ಕೂಡಾ ಇದೆ. ಬರಗಾಲದಂತಹ ಸಂದರ್ಭದಲ್ಲಿ ಶ್ರೀ ದೇವಿಯು ತನ್ನ ಮೈ ಶಾಖದಿಂದ ತರಹೇವಾರಿ ತರಕಾರಿ ಮೂಲಕ ಜನರಿಗೆ ಉಣಬಡಿಸಿ ಹಸಿವು ನೀಗಿಸಿದ್ದಳು ಎಂಬ ಬಗ್ಗೆ ಪುರಾಣ ಕಥೆ ಇದೆ.
೨೫ರಂದು ಸಂಜೆ ೫ ಗಂಟೆಗೆ ಜರುಗಲಿರುವ ಮಹಾ ರಥೋತ್ಸವಕ್ಕೆ ಅರ್ಚಕ ಪೂಜಾರ ಮನೆತನದವರು ರಥವನ್ನು ಶುಚಿಗೊಳಿಸಿ ತಳಿರು ತೋರಣಗಳಿಂದ ಶೃಂಗರಿಸಿದ್ದಾರೆ. ರಥಬೀದಿಯನ್ನು ಕೂಡಾ ಸ್ವಚ್ಛಗೊಳಿಸಲಾಗಿದೆ. ದೇವಸ್ಥಾನದ ಒಳ ಹಾಗೂ ಹೊರ ಪ್ರಾಂಗಣ ವಿದ್ಯುತ್ ದೀಪಾಲಂಕಾರಗಳಿಂದ ಜಗಮಗಿಸುತ್ತಿದೆ.

Next Article